ಹರಪನಹಳ್ಳಿ
ಬೆಳಗಾವಿ ಜಿಲ್ಲೆ ಹಾಗೂ ದಾವಣಗೆರೆಯ ಜಗಳೂರು ತಾಲೂಕಿನ ವರದಿಗಾರರ ಮೇಲೆ ನಡೆದ ಹಲ್ಲೆ ಘಟನೆಯನ್ನು ಖಂಡಿಸಿ ಹರಪನಹಳ್ಳಿ ಪ್ರೆಸ್ ಕ್ಲಬ್ನಿಂದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಎಚ್.ಎ.ಸುರೇಂದ್ರಬಾಬು ಮಾತನಾಡಿ ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮದ ಹಕ್ಕನ್ನು ಕಸಿದುಕೊಳ್ಳುವ ನಿರಂತರ ಕುತಂತ್ರಗಳು ನಡೆಯುತ್ತಿವೆ. ವರದಿಗಾರರು ನಿಷ್ಪಕ್ಷವಾಗಿ, ನಿರ್ಭಯವಾಗಿ ವರದಿ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಆದಷ್ಟು ಶೀಘ್ರ ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಪ್ರೆಸ್ಕ್ಲಬ್ ಉಪಾಧ್ಯಕ್ಷ ಬಿ.ರಾಮಪ್ರಸಾದ್ಗಾಂಧೀ ಮಾತನಾಡಿ ಬೇರೆ ಬೇರೆ ಕಡೆಗಳಲ್ಲಿ ಮೇಲಿಂದ ಮೇಲೆ ಪತ್ರಿಕಾ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಸರಕಾರ ಗಂಭೀರವಾಗಿ ಪರಿಗಣಿಸಬೇಕು ಈ ರೀತಿ ಮುಂದೆಚ್ಚರಿಕೆ ಕ್ರಮಗಳನ್ನು ಕೈಗೋಳ್ಳಬೇಕು ಎಂದು ಹೇಳಿದರು.
ಪ್ರೆಸ್ಕ್ಲಬ್ ಗೌರವಾಧ್ಯಕ್ಷ ಬಿ.ಮಾಧವರಾವ್, ಪ್ರಧಾನ ಕಾರ್ಯದರ್ಶಿ ಕೆ.ಉಚ್ಚೆಂಗೆಪ್ಪ, ಸಹಕಾರ್ಯದರ್ಶಿ ಪಿ.ಕರಿಬಸಪ್ಪ, ಸದಸ್ಯರಾದ ಎನ್.ರವಿ, ಪ್ರಹ್ಲಾದಗೌಡ, ಎಂ.ಸುರೇಶ್ ಮಾತನಾಡಿದರು.ಈ ಸಂದರ್ಭಧಲ್ಲಿ ಸದಸ್ಯರಾದ ಕೆ.ಬಸವರಾಜ, ಎಂ. ವೆಂಕಟೇಶ್, ಪರಶುರಾಮ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ