ಚಿತ್ರದುರ್ಗ;
ಹೊಳಲ್ಕೆರೆ ಪೋಲಿಸ್ ಸಬ್ಇನ್ಸ್ಪೆಕ್ಟರ್ ಮಹೇಶ್ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ವಕೀಲರ ಸಂಘ ಮನವಿ ಮಾಡಿದೆ.
ನಮ್ಮ ಸಂಘದ ಸದಸ್ಯರಾದ ಪ್ರತಾಪ್ ಕುಮಾರ್ಗೆ ಹೊಳಲ್ಕೆರೆ ಪೋಲಿಸ್ ಸಬ್ಇನ್ಸ್ಪೆಕ್ಟರ್ ಹಲ್ಲೆಯನ್ನು ಮಾಡಿದ್ದು ಈ ಬಗ್ಗೆ ಮನವಿಯನ್ನು ಸಂಘಕ್ಕೆ ನೀಡಿದ ಹಿನ್ನಲೆಯಲ್ಲಿ ಸಭೆಯನ್ನು ನಡೆಸಲಾಯಿತು. ಇಲ್ಲಿ ಪ್ರತಾಪ್ ಕುಮಾರ ಅವರ ಮೇಲೆ ಆದ ಹಲ್ಲೆಯ ಬಗ್ಗೆ ಸಭೆಗೆ ತಿಳಿಸಿದ್ದಾರೆ ಇದರಿಂದ ಹಲ್ಲೆಯನ್ನು ಖಂಡಿಸಿ ಒಂದು ದಿನ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿಯಲು ತೀರ್ಮಾನಿಸಲಾಯಿತು.
ಹಲ್ಲೆಯನ್ನು ಮಾಡಿದ ಸಬ್ ಇನ್ಸ್ಪೆಕ್ಟರ್ ಮಹೇಶ ವಿರುದ್ದ ಪೋಲೀಸ್ ದೂರು ಪ್ರಾಧಿಕಾರಕ್ಕೆ ದೂರನ್ನು ನೀಡುವುದು ಅವರ ವಿರುದ್ಧ ಪೋಲಿಸಿನವರು ಸರಿಯಾದ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಅವರ ವಿರುದ್ಧ ಖಾಸಗಿ ದೂರನ್ನು ದಾಖಲಿಸಲು ತೀರ್ಮಾನಿಸಿ ಇನ್ನು ಮುಂದೆ ಯಾವುದೇ ವಕೀಲರ ಮೇಲೆ ಯಾವುದೇ ಸಂದರ್ಭದಲ್ಲಿ ಹಲ್ಲೆ ನಡೆದಲ್ಲಿ ಆರೋಪಿತರ ಪರವಾಗಿ ನಮ್ಮ ಸಂಘದ ಯಾವುದೇ ವಕೀಲರು ವಕಾಲತ್ತನ್ನು ವಹಿಸಬಾರದೆಂದು ಸಭೆ ತೀರ್ಮಾನಿಸಲಾಯಿತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿರುವ ಮಹೇಶ್ ಅವರ ವಿರುದ್ಧ ಇಲಾಖೆ ಮಟ್ಟದಲ್ಲಿ ತನಿಖೆಯನ್ನು ಕೈಗೊಂಡು ಸೂಕ್ತ ಕ್ರಮವನ್ನು ಜರುಗಿಸಲು ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಬೇಕೆಂತಲೂ ಹಾಗೂ ಈ ಪ್ರಾಧಿಕಾರದಿಂದಲೂ ಸಹ ಸೂಕ್ತ ಕ್ರಮ ತೆಗೆದುಕೊಳ್ಳಲು ಮನವಿ ಮಾಡಲಾಯಿತು.