ಬೆಂಗಳೂರು
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ನಿಧನದಿಂದ ಮುಂದೂಡಲಾಗಿದ್ದ ಮೈಸೂರಿನ ಅರಮನೆ ಧಾರ್ಮಿಕ ಕಾರ್ಯಗಳು ನಾಳೆ ನಡೆಯಲಿವೆ.
ಪ್ರಮೋದಾದೇವಿ ಒಡೆಯರ್ ಅವರ ತಾಯಿ ಚಿಕ್ಕಮ್ಮಣ್ಣಿ ವಿಜಯದಶಮಿಯಂದು ನಿಧನರಾಗಿದ್ದರು. ಹೀಗಾಗಿ ವಿಜಯ ದಶಮಿಯಂದು ನಡೆಯಬೇಕಿದ್ದ ಅರಮನೆ ಪೂಜಾ ಕೈಂಕರ್ಯ ಗಳನ್ನ ಮುಂದೂಡಲಾಗಿತ್ತು. ಈ ನಡುವೆ ಕಳೆದ ಎರಡು ದಿನಗಳಿಂದಲೂ ಅರಮನೆ ವಿದ್ಯುತ್ ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿತ್ತು.
ವಜ್ರಮುಷ್ಠಿ ಕಾಳಗ, ಬನ್ನಿ ಮರ ಪೂಜೆ , ಇನ್ನಿತರ ಧಾರ್ಮಿಕ ಕಾರ್ಯಗಳು ನಾಳೆ ಬೆಳಗ್ಗೆಯಿಂದಲೇ ನಡೆಯಲಿದೆ. ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1:30 ರವರಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಒಳಾಂಗಣದ ಪ್ರವೇಶಕ್ಕೆ ಮಾತ್ರ ನಿರ್ಬಂಧವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ