ಬೆಂಗಳೂರು
ಏಳು ತಿಂಗಳಿಗೆ ಜನಿಸಿದ ಹೆಣ್ಣು ಮಗು ಮೃತಪಟ್ಟಿದ್ದರಿಂದ ನೊಂದ ತಾಯಿ ಮಾನಸಿಕ ಖಿನ್ನತೆಗೊಳಗಾಗಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಪೀಣ್ಯದ ಬೆಂಗಳೂರು ಒನ್ ಕೇಂದ್ರದ ಸಮೀಪ ವಾಸಿಸುತ್ತಿದ್ದ ವಿಜಯಲಕ್ಷ್ಮಿ (19) ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ.ತುಮಕೂರು ಮೂಲದ ನವೀನ್ ಎಂಬಾತನಿಗೆ ಕಳೆದ ಏಪ್ರಿಲ್ನಲ್ಲಿ ವಿಜಯಲಕ್ಷ್ಮಿಯನ್ನು ವಿವಾಹ ಮಾಡಿಕೊಡಲಾಗಿತ್ತು .
ಗರ್ಭಿಣಿಯಾಗಿದ್ದ ವಿಜಯಲಕ್ಷ್ಮಿಗೆ 7 ತಿಂಗಳು ತುಂಬುವ ಮೊದಲೇ ಹೆರಿಗೆಯಾಗಿ ಹೆಣ್ಣುಮಗು ಜನಿಸಿತ್ತು. 3 ದಿನಗಳ ಕಾಲ ತುಮಕೂರಿನ ಆಸ್ಪತ್ರೆಯಲ್ಲಿಟ್ಟುಕೊಂಡು ಮನೆಗೆ ಕಳುಹಿಸಿದ್ದ ಮಗು ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ಮಗು ಮೃತಪಟ್ಟಿತ್ತು.
ಮಗು ಸಾವನ್ನು ಗಂಭೀರವಾಗಿ ತೆಗೆದುಕೊಂಡು ಮಾನಸಿಕ ಖಿನ್ನತೆಗೊಳಗಾಗಿದ್ದ ವಿಜಯಲಕ್ಷ್ಮಿ,2 ಬಾರಿ ಆತ್ಮಹತ್ಯೆ ಯತ್ನ ನಡೆಸಿದ್ದರು.ತವರು ಮನೆಯಲ್ಲಿಯೇ ವಿಜಯಲಕ್ಷ್ಮಿಯನ್ನು ಇರಿಸಿಕೊಂಡು ಆಕೆಯ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿತ್ತು.
ವಿಜಯಲಕ್ಷ್ಮಿ ಓದುತ್ತಿದ್ದ ಶಾಲೆಯಿಂದ ವರ್ಗಾವಣೆ ಪತ್ರ ತರಲು ನಿನ್ನೆ ಮಧ್ಯಾಹ್ನ 3ರ ವೇಳೆ ತಾಯಿ ಹೋಗಿ ಬರುವಷ್ಟರಲ್ಲಿ ಒಂಟಿಯಾಗಿದ್ದ ವಿಜಯಲಕ್ಷ್ಮಿ ನೇಣಿಗೆ ಶರಣಾಗಿದ್ದಾರೆ.
ಗೂಡ್ಸ್ ಆಟೋ ಚಾಲಕನಾಗಿದ್ದ ತಂದೆ 1 ಗಂಟೆ ಬಳಿಕ ಬಂದು ನೋಡುವಷ್ಟರಲ್ಲಿ ಈ ದುರ್ಘಟನೆ ನಡೆದು ಹೋಗಿತ್ತು. ಪ್ರಕರಣ ದಾಖಲಿಸಿರುವ ಪೀಣ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ