ದಾವಣಗೆರೆ:
ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲು ವಿಶ್ವದ ಅತಿ ದೊಡ್ಡ ಕನ್ಸ್ಟ್ರಕ್ಷನ್ ಕಂಪನಿಗಳಲ್ಲಿ ಒಂದಾದ ಹಾಂಗ್ಕಾಂಗ್ನ ಸಿ.ಎನ್.ಟಿ.ಸಿ. ಕಂಪನಿಯ ಅಧಿಕಾರಿಗಳು ನಗರದ ಜಿ.ಎಂ.ಐ.ಟಿ ಕಾಲೇಜಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಹಾಂಗ್ಕಾಂಗ್ನ ಸಿ.ಎನ್.ಟಿ.ಸಿ. ಉಪಾಧ್ಯಕ್ಷ ಲಿ ಪಿಮಿಂಗ್ ಮತ್ತು ಅನಿವಾಸಿ ಭಾರತೀಯ ಎಂಜಿನಿಯರ್ ಪ್ರಸಾದ್ ರಾವ್ ಪಾಸಂ ಅವರು ಜಿ.ಎಂ.ಐ.ಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಇಚ್ಛಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಲ್ಲಾ ಲ್ಯಾಬ್ಗಳನ್ನು ಪರಿಶೀಲಿಸಿದರು. ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್.ಗೋವರ್ಧನ್ಸ್ವಾಮಿ ಅವರು ತಮ್ಮಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲ ಡಾ. ಪಿ. ಪ್ರಕಾಶ್, ಉಪ ಪ್ರಾಂಶುಪಾಲ ಡಾ. ಬಿ.ಆರ್. ಶ್ರೀಧರ್ ಅವರು ಕಾಲೇಜಿನ ಕ್ಯಾಂಪಸ್ನಲ್ಲಿ ಸುತ್ತಾಡಿಸಿ ಮಾಹಿತಿ ನೀಡಿದರು.