ದಾವಣಗೆರೆ:
ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಕರೆ ನೀಡಿದ್ದ ಬಂದ್ ಅನ್ನು ಖಂಡಿಸಿರುವ ವಿದ್ಯಾರ್ಥಿನಿಯೊಬ್ಬಳು, ಬಂದ್ಗೆ ಕರೆ ನೀಡಿದ್ದ ಸಂಘಟನೆಗಳ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತ್ರಿಭಾಷೆಗಳಲ್ಲಿ ವಾಗ್ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಇಂದು ಶಾಲೆಗೆ ಹೊರಟಾಗ ಬಸ್ ಸಿಗದಿದ್ದಕ್ಕೆ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿನಿ ಮೌನಿಕ, ಬಂದ್ ಮಾಡೋದ್ರಿಂದ ಏನೂ ಪ್ರಯೋಜನವಾಗಲ್ಲ ಅಂತ ಮೂರು ಭಾಷೆಯಲ್ಲಿ ಮಾತನಾಡಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾಳೆ.
ಕಾರಿಗನೂರು ಕ್ರಾಸ್ನ ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿನಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ತಿಂಗಳಲ್ಲಿ ನಾಲ್ಕು ದಿನ ರಜೆ, ಹಬ್ಬ ಹರಿದಿನ ಅಂತ ರಜೆ, ಈ ಮಧ್ಯೆ ಬಂದ್ ಅಂತ ರಜೆ ಹೀಗೆ ರಜೆ ಮೇಲೆ ರಜೆ ಕೊಟ್ರೆ ನಾವ್ ಓದಿಕೊಳ್ಳೋದು ಹೇಗೆ? ಎಂದು ಆಕೆ ಸರಕಾರವನ್ನು ಪ್ರಶ್ನಿಸಿದ್ದಾಳೆ.