ತಾಲೂಕು ಘಟಕದ ಪಿಂಜಾರ್ ಸಂಘದ ಸಮಿತಿ ರಚನೆ

ಹರಿಹರ:

    ನಗರದ ರಾಜಾರಂ ಕಾಲೋನಿಯಲ್ಲಿ ಸೋಮವಾರದಂದು ನಡೆದ ಸಭೆಯಲ್ಲಿ ನದಾಫ್, ಪಿಂಜಾರ್ ಸಂಘದ ತಾಲೂಕು ಘಟಕದ ಸಮಿತಿಯನ್ನು ಕೆಳಕಾಣಿಸಿದಂತೆ ರಚಿಸಲಾಗಿದೆ.

    ಮಹಬೂಬ್ ಅಲಿ (ಫೌಂಡ್ರಿ) (ಅಧ್ಯಕ್ಷರು), ಹಯಾತ್ ಸಾಬ್ (ಗೌರವಾಧ್ಯಕ್ಷರು), ಬಾಬುಸಾಬ್ ನದಾಫ್ (ಉಪಾಧ್ಯಕ್ಷರು), ನವೀದ್ ಅಂಜುಂ (ಕಾರ್ಯದರ್ಶಿ), ಮೊಹಮ್ಮದ್ ಶಫಿಉಲ್ಲಾ ಕಿತ್ತೂರು (ಸಹಕಾರ್ಯದರ್ಶಿ), ಅನ್ವರ್ ಅಹ್ಮದ್ (ಸಂಘಟನಾ ಕಾರ್ಯದರ್ಶಿ), ಮಹಬೂಬ್ ಅಲಿ ಜಂಗಿ ((ಖಜಾಂಚಿ). 

     ಮೊಹಮ್ಮದ್ ಶರೀಫ್ ಅಶ್ರಫಿ, ಮೊಹ್ಮದ್ ಜಾಕೀರ್, ಅಬ್ದುಲ್ ಖಾದರ್ ರಿಜ್ವಿ, ಹಬೀಬುರ್ ರಹಮಾನ್, ಶಾಮೀರ್, ಸಿರಾಜ್ ಅಹಮ್ಮದ್, ಮೊಹಮ್ಮದ್ ಸಲೀಂ, ಮೊಹಮ್ಮದ್ ಶರೀಫ್ ಬ್ಯಾಡಗಿ, ಉಸ್ಮಾನ್ ಸಾಬ್ (ಆಜಾದ್ ವೆಲ್ಡಿಂಗ್), ಜಾಕಿರ್ ಹುಸೇನ್, ಹಾಜಿ ಹಮೀದ್ ಸಾಬ್, ಎಚ್.ರಾಜಾಸಾಬ್, ಇಂತಿಯಾಜ್, ಜಮೀರ್ ಅಹಮ್ಮದ್, ರೆಹಮಾನ್ ಬಾರ್‍ಬೆಂಡರ್, ಮೊಹಮ್ಮದ್ ಹನೀಫ್ ರಿಜ್ವಿ, ರಫೀಕ್ ಪಟೇಲ್, ಇಸ್ಮಾಯಿಲ್ ಡಿ.ಕೆ., ವಹೀದಾ ಬಾನು, ಫರೀದಾ ಬಾನು, ರಜಿಯಾ ಬೇಗಂ ಮತ್ತು ಫೈರೋಜ್ ಬಾನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

       ಸಂಘದ ಜಿಲ್ಲಾಧ್ಯಕ್ಷ ಅಯಾಜ್ ಹುಸೇನ್‍ರ ಸೂಚನೆ ಮೇರೆಗೆ ಸಂಘದ ರಾಜ್ಯ ಸಮಿತಿ ಸದಸ್ಯ ದಿಬ್ಬದಹಳ್ಳಿ ರಶೀದ್ ಸಾಬ್ ಹಾಗೂ ವಿಭಾಗೀಯ ಉಪಾಧ್ಯಕ್ಷರಾದ ಹಸನ್‍ಪೀರ್ ಸಾಬ್‍ರವರು ಸಮಿತಿಯನ್ನು ರಚಿಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸಮಿತಿ ಸದಸ್ಯ ದಿಬ್ಬದಹಳ್ಳಿ ರಶೀದ್ ಸಾಬ್ ಹಾಗೂ ವಿಭಾಗೀಯ ಉಪಾಧ್ಯಕ್ಷ ಹಸನ್‍ಪೀರ್ ಸಾಬ್ ಇತರರು ಉಪಸ್ಥಿತರಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap