ಸಿರುಗುಪ್ಪ :-
ಕರ್ನಾಟಕ ಸರಕಾರ ರಾಜ್ಯದಲ್ಲಿನ ಮಹನೀಯರ ಆದರ್ಶ ಪುರುಷ ತತ್ತ್ವ ಆದರ್ಶ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಜಯಂತಿಗಳನ್ನು ಆಚರಿಸುತ್ತಿದ್ದೇವೆ ಚುನಾವಣಾ ನ.8ಕ್ಕೆ ನೀತಿ ಸಂಹಿತೆ ಮುಗಿಯುವುದರಿಂದ ತಾಲ್ಲೂಕು ಆಡಳಿತ ಹಾಗೂ ಮುಸ್ಲಿಂ ಸಮಾಜ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರನ್ನು ಸೇರಿಸಿಕೊಂಡು ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ನವೆಂಬರ್ 10ರಂದು ಶನಿವಾರ ಸರಕಾರ ಹಾಗೂ ಸಮುದಾಯ ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಮಿನಿ ವಿಧಾನಸೌಧ ತಾಲ್ಲೂಕು ಕಚೇರಿಯಲ್ಲಿ ಭಾವಪೂರ್ವ ಸಭೆಯಲ್ಲಿ ನಿರ್ಧರಿಸಲಾಯಿತು.
ಗಣ್ಯರ ಟಿಪ್ಪುಸುಲ್ತಾನ್ ಸರ್ಕಲ್ ನಿಂದ ಮುಖ್ಯ ರಸ್ತೆಯಿಂದ ಮೆರವಣಿಗೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿ ನಡೆಸಲಾಯಿತು ಖಾಜಿ ಸೈಯದ್ ಅಬ್ದುಲ್ ರಜಾಖ್ ಖಾದ್ರಿ,ಜಿಲ್ಲಾ ಕುಮಾರ್ ಸದಸ್ಯರ ಚಿಕ್ಕಿ ಹುಸೇನ್ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಡಿ ಹಾಷಿಂ, ನಗರ ಸಭೆ ಸದಸ್ಯರಾದ ಬಿ.ಅಫ್ಜಲ್ ಹುಸೇನ್, ಮಹಮ್ಮದ್ ನೂರುಲ್ಲಾ, ಬಿಸಿಎಂ ಅಧಿಕಾರಿ ಶಾಮಪ್ಪ, ಮುಖಂಡರಾದ ಹಾಜಿ ಎಚ್.ಹುಸೇನ್ ಬಾಷು?, ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿಗಳು,ವಿವಿಧ ಇಲಾಖೆಯ ಅಧಿಕಾರಿಗಳು,ಭಾಗವಹಿಸಿ ಸಲಹೆ ಸೂಚನೆ ನೀಡಿದರು. ವಿಶೇಷ ಉಪನ್ಯಾಸಕರಾಗಿ ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಮಾಜಿ ಅಧ್ಯಕ್ಷ ಎಂ.ಪಂಪಾಪತಿ ಮುಖ್ಯ ಭಾಷಣ ಮಾಡುವರು ಸಭೆಯಲ್ಲಿ ತೀರ್ಮಾನಿಸಿದರು.