ವಿಕೃತಿ ಮೆರೆದ ಶಿಕ್ಷಕ

ಬೆಂಗಳೂರು

         ಹಳೆಯ ವಿದ್ಯಾರ್ಥಿನಿಗೆ ಬೆತ್ತಲೇ ಫೋಟೋ ಕಳುಹಿಸಿ ಶಿಕ್ಷಕನೊಬ್ಬ ವಿಕೃತಿ ಮೆರೆದ ಕೃತ್ಯ ಬೆಳಕಿಗೆ ಬಂದಿದೆ.ಬೆತ್ತಲೆ ಫೋಟೋವನ್ನು ಕಳುಹಿಸಿದ್ದ ಮಂಡ್ಯ ಮೂಲದ ಶಿಕ್ಷಕ ಚನ್ನೇಗೌಡನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

        ತುಮಕೂರಿನಲ್ಲಿ ವಿದ್ಯಾರ್ಥಿನಿಯು 9ನೇ ತರಗತಿಯಲ್ಲಿ ಓದುತ್ತಿದ್ದಾಗ ಚನ್ನೇಗೌಡ ಗಣಿತ ಪಾಠ ಮಾಡುತ್ತಿದ್ದನು ನಂತರ ಯುವತಿ ಮದುವೆಯಾಗಿ ನಗರದ ಗಂಡನ ಮನೆ ಸೇರಿದ್ದಳು.ಇತ್ತೀಚೆಗೆ ಚನ್ನೇಗೌಡ ಹೇಗೋ ಯುವತಿ ಫೋನ್ ನಂಬರ್ ಪಡೆದು ಆಕೆಯ ಜೊತೆ ಚಾಟ್ ಮಾಡಲು ಯತ್ನಿಸಿ ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೋ ಕಳುಹಿಸಿ ಹೇಗಿದೆ ನೋಡಿ ಹೇಳು ಎಂದು ಮೆಸೇಜ್ ಮಾಡಿದ್ದಾನೆ.ಈ ಮೆಸೇಜ್ ನೋಡಿದ ಯುವತಿ ತನ್ನ ಪತಿಯ ಮೂಲಕ ಚನ್ನೇಗೌಡನ ವಿರುದ್ಧ ದೂರು ನೀಡಿದ್ದಾಳೆ

ಕಾರು ಡಿಕ್ಕಿ ಇಬ್ಬರಿಗೆ ಗಾಯ

        ವೇಗವಾಗಿ ಬಂದ ಕಾರು ಹರಿದು ರಸ್ತೆ ಬಂದಿ ನಡೆದು ಹೋಗುತ್ತಿದ್ದ ಇಬ್ಬರು ಗಾಯಗೊಂಡಿರುವ ಘಟನೆ ಕೆಆರ್‍ಪುರಂನ ಸರಸ್ವತಿಪುರಂನಲ್ಲಿ ನಡೆದಿದ್ದು ಅಪಘಾತವು ತಡವಾಗಿ ಬೆಳಕಿಗೆ ಬಂದಿದೆ.

        ಗಾಯಗೊಂಡಿರುವ ವೃದ್ಧೆ ಶೀಲಾ ಹಾಗೂ ಲತಾಪಾಂಡೆ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಳೆದ ಜ. 8ರ ಸಂಜೆ ಗರುಡಾಚಾರ್ ಪಾಳ್ಯದ ಕಡೆಯಿಂದ ವೇಗವಾಗಿ ಹೋಗುತ್ತಿದ್ದ ಜೆನ್ ಮಾರುತಿ ಕಾರು ಮಾರ್ಗ ಮಧ್ಯೆ ಸರಸ್ವತಿಪುರಂನಲ್ಲಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿಗಳಿಗೆ ಗುದ್ದಿದೆ ಅಪಘಾತದಿಂದ ಪಾದಾಚಾರಿಗಳು ಗಾಯಗೊಂಡು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

         ಕೇವಲ ನಾಲ್ಕು ಸೆಕೆಂಡ್ ಗಳಲ್ಲಿ ಮಾರುತಿ ಕಾರು ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಬೆಚ್ಚಿ ಬೀಳಿಸುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆ.ಆರ್ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap