ತುರುವೇಕೆರೆ
ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ವತಿಯಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಟಿಪ್ಪು ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಸರ್ಕಾರದ ವತಿಯಿಂದ ಕಚೇರಿಗಳಲ್ಲಿ ಮಾತ್ರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ್ದು ಅದರಂತೆ ತಾಲ್ಲೂಕು ದಂಡಾಧಿಕಾರಿ ನಾಗರಾಜು, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಜನಪ್ರತಿನಿಧಿಗಳಿಂದ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಟಿಪ್ಪು ಜಯಂತಿ ಆಚರಿಸಲಾಯಿತು. ಯಾವುದೇ ಸಭೆ ಸಮಾರಂಭ ನಡೆಯಲಿಲ್ಲ. ರಾಜ್ಯಾದ್ಯಂತ ಬಿ.ಜೆ.ಪಿ ಪಕ್ಷ ಟಿಪ್ಪು ಜಯಂತಿ ಆಚರಣೆ ವಿರೋಧದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿ.ಜೆ.ಪಿ ಶಾಸಕ ಮಸಾಲಾ ಜಯರಾಮ್ ಕಾರ್ಯಕ್ರಮದಲ್ಲಿ ಗೈರು ಹಾಜರಿದ್ದರು. ಪೊಲೀಸ್ ಸಿಪಿಐ ಸಲೀಂ ಅಹಮದ್, ಪಿಎಸ್ಐ ರಾಜು ಅವರ ಮಾರ್ಗದರ್ಶನದಲ್ಲಿ ಪಟ್ಟಣದಲ್ಲಿ ಟಿಪ್ಪು ಜಯಂತಿ ಶಾಂತಿಯುತ ಆಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಪಿ.ಕೆ.ನಂಜೇಗೌಡ, ಎಪಿಎಮ್ಸಿ ಅಧ್ಯಕ್ಷ ರೇಣುಕಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ನದೀಮ್, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಇಬ್ರಾಹಿಂ, ರಾಜ್ಯ ಸಂಚಾಲಕ ರಫೀಕ್ ಅಹಮದ್, ಮುಸ್ಲಿಂ ಮುಖಂಡರಾದ ಸೌಕತ್ ಆಲಿ, ಜಾಕೀರ್, ಅಪ್ಸರ್, ರಿಯಾಜ್, ಇರ್ಫಾನ್, ಕೊಳಾಲ ಗಂಗಾಧರ್, ವೆಂಕಟೇಶ್ ಮೂರ್ತಿ, ಶಿವು ಅಧಿಕಾರಿಗಳಾದ ಪ್ರಹ್ಲಾದ್, ಚಿದಾನಂದ್, ಸಿಪಿಐ ಸಲೀಂ ಅಹಮದ್, ಪಿಎಸ್ಐ ರಾಜು ಸೇರಿದಂತೆ ಅನೇಕ ಟಿಪ್ಪು ಅಭಿಮಾನಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ