ದಾವಣಗೆರೆ:
ತಾಲೂಕಿನ ಹೊನ್ನಮರಡಿ ಆಂಜನೇಯ ನಗರದಲ್ಲಿ ಸುವರ್ಣ ಕರ್ನಾಟಕ ವೇದಿಕೆಯ ಗ್ರಾಮ ಘಟಕದ 63ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೀಡಾಕೂಟ, ರಂಗೋಲಿ ಸ್ಪರ್ಧೆ ನಡೆಯಿತು.
ರಾಜ್ಯೋತಸ್ವದ ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕರಾದ ಹೆಚ್.ಕೆ.ವಿರೂಪಾಕ್ಷಪ್ಪ, ಹೆಚ್.ಎಂ.ಚಂದ್ರಯ್ಯ ಹಾಗೂ ಹೆಚ್.ಎಸ್. ನಾಗೇಂದ್ರಪ್ಪ ನೆರವೇರಿಸಿದರು.
ಕ್ರೀಡಾಕೂಟಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಅಶ್ವಿನಿ, ಮುಖ್ಯ ಶಿಕ್ಷಕಿ ಶಾರದಮ್ಮ ಚಾಲನೆ ನೀಡಿದರು.
ರಂಗೋಲಿ ಸ್ಪರ್ಧೆ, ಶಾಲಾ ಮಕ್ಕಳಿಗೆ ಮ್ಯೂಜಿಕಲ್ ಛೇರ್, ಯುವಕರಿಂದ ಕಬ್ಬಡಿ ಕ್ರೀಡೆಗಳು ನಡೆದವು. ಕಾರ್ಯಕ್ರಮದಲ್ಲಿ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ಕುಮಾರ್ ಆರ್. ಮಂಜುನಾಥ್ ಈ. ಬಾಳೇಕರ್, ಕ್ರೀಡಾಕೂಟ ನಿರ್ವಾಹಕ ಎಸ್. ತಿಪ್ಪೇಶಣ್ಣ, ಟಿ. ಬಸವರಾಜ್, ಅಂಜಿನಪ್ಪ, ಸಿದ್ಧಣ್ಣ ಗಂಗಣ್ಣನವರ್, ಓ.ಬಿ. ರಾಜು, ಬಸವರಾಜು, ಪ್ರಶಾಂತ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ