ತಿಪಟೂರು :
ತಾಲೂಕಿನ ಅನಗೊಂಡನಹಳ್ಳಿ ಗ್ರಾಮದ ತೊಟದ ಮನೆಯಲ್ಲಿದ್ದ ಸಾಕು ನಾಯಿಯನ್ನು ಕಳೆದ ರಾತ್ರಿ ಚಿರತೆಗಳು ತಿಂದು ಹಾಕಿರುವ ಘಟನೆ ನಡೆದಿದೆ. ಗ್ರಾಮದ ಶಾಂತಕುಮಾರ್ ಎಂಬುವರ ತೋಟದ ಮನೆಯಲ್ಲಿ ಕಳೆದ ವಾರವಷ್ಟೆ ಚಿರತೆಗಳು ಒಂದು ನಾಯಿಯನ್ನು ತಿಂದು ಹಾಕಿದ್ದು ನಿನ್ನೆ ರಾತ್ರಿ ಪುನಃ ತೊಟದ ಮನೆ ಹತ್ತಿರ ಬಂದು ಎರಡು ಸಾಕು ನಾಯಿಗಳನ್ನು ಮನೆಯಿಂದ ಸ್ವಲ್ಪದೂರ ಎಳೆದು ಕೊಂಡು ಹೋಗಿ ತಿಂದಿವೆ.
ಈ ಕುರಿತು ಅರಣ್ಯ ಇಲಾಖೆಗೆ ಒಂದು ವಾರದ ಹಿಂದೆಯೇ ದೂರು ನೀಡಿದರು, ಅರಣ್ಯ ಇಲಾಖೆಯವರು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷಿಸಿರುವುದು ಗ್ರಾಮಸ್ಥರನ್ನು ಅತಂಕಕ್ಕೆ ಎಡೆ ಮಾಡಿದೆ. ಇತ್ತಿಚಿನ ದಿನಗಳಲ್ಲಿ ಈ ಗ್ರಾಮದ ಅಸು ಪಾಸಿನ ಬೇಲಿ ಸಾಲಿನಲ್ಲಿ ಚಿರತೆಗಳು ಕಾಣಿಸುತ್ತಿದ್ದು ಗ್ರಾಮಸ್ಥರು ಭಯ ಭೀತರಾಗಿದ್ದಾರೆ ಚಿರತೆ ಹಾವಳಿ ತಪ್ಪಿಸಲು ಇಲಾಖೆಯವರು ಬೊನ್ಗಳನ್ನು ತತ್ಕ್ಷಣವೇ ಇಟ್ಟು ಚಿರತೆಗಳನ್ನು ಸೆರೆ ಹಿಡಿಯ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ