ವಾರಣಾಸಿ:
ಪಾಶ್ಚಿಮಾತ್ಯ ರಾಷ್ಡ್ರಗಳಲ್ಲಿ ಒಳನಾಡು ಬಂದರುಗಳು ಸರ್ವೇಸಾಮಾನ್ಯ ಆದರೆ ಭಾರತದಂತ ಅಭಿವೃಧಿಶೀಲ ರಾಷ್ಟ್ರಗಳಲ್ಲಿ ಇಂತಹ ಬಂದರು ಕಾಣಸಿಗುವುದು ಅತಿವಿರಳ ಈ ನಿಟ್ಟಿನಲ್ಲಿ ಆಲೋಚಿಸಿರುವ ನಮ್ಮ ದೇಶದ ಸಾರಥಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ದೇಶದ ಮೊದಲ ಒಳನಾಡು ಬಂದರನ್ನು ನೆನ್ನೆ ಲೋಕಾರ್ಪಣೆ ಮಾಡಿದ್ದಾರೆ ಇದರಿಂದ ವ್ಯಾಪಾರ ವೃಧಿಯ ಜೊತೆಗೆ ಪ್ರವಾಸೋಧ್ಯಮವು ಉತ್ತಮ ಅಭಿವೃಧಿಯಾಗುವ ೆಲ್ಲಾ ನಿರೀಕ್ಷೆಗಳು ಇವೆ ಎಂದು ನಿಪುಣರು ಹೇಲುತ್ತಿದ್ದಾರೆ .
ನಮ್ಮ ದೇಶದಲ್ಲಿ ಸಮುದ್ರ ಮಾರ್ಗದಲ್ಲಿ ಸಾರಿಗೆ ಸಾಮಾನ್ಯ. ಆದರೆ ಇದೀಗ ಒಳನಾಡಿನ ಜಲ ಮಾರ್ಗಗಳನ್ನು ಸಹ ಬಳಸಿ ಕೇಂದ್ರ ಸರ್ಕಾರ ಸಾರಿಗೆ ಕ್ಷೇತ್ರದಲ್ಲಿ ಹೊಸ ಪರ್ವ ಹುಟ್ಟುಹಾಕಲು ಮುಂದಾಗಿದಲ್ಲದೇ ಅದರ ಭಾಗವಾಗಿ ಪ್ರಧಾನಿ ಮೋದಿ ಹಾಗೂ ಬಂದರು ಸಚಿವ ನಿತಿನ್ ಗಡ್ಕರಿ ಅವರು ನೆನ್ನೆ ಗಂಗಾ ನದಿಯ ಮೇಲೆ ನಿರ್ಮಾಣಗೊಂಡಿರುವ ಒಳನಾಡು ಬಂದರನ್ನು ಉದ್ಘಾಟನೆ ಮಾಡಿದ್ದಾರೆ . ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಒಳನಾಡು ಬಂದರು ಉತ್ತರ ಪ್ರದೇಶದ ಹಾಲ್ದಿಯಾ ದಿಂದ ಶುರುವಾಗಿ ಪಶ್ಚಿಮ ಬಂಗಾಳದವರೆಗೆ ಸಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.