ನವದೆಹಲಿ
ಪ್ರಜಾಪ್ರಭುತ್ವದ ಗುರು ಎಂದೇ ಕರೆಲ್ಪಡುವ ಭಾರತದ ಕೇಂದ್ರ ಚುನಾವಣಾ ಆಯೋಗ ಹಾಗೂ ಪ್ರಧಾನ ಮಂತ್ರಿಯವರ ಕಾರ್ಯಕ್ರಮಗಳು ಒಂದೇ ದಿನದಲ್ಲಿ ಎರೆಡೆರಡು ಬಾರಿ ಬದಲಾಗಿರುವುದು ಚುನಾವಣಾ ಆಯೋಗದ ಸಾಚಾತನಕ್ಕೆ ಸಾಕ್ಷಿಯಾಗಿದೆ ಎಂದು ವಿಪಕ್ಷ ಟೀಕೆ ಮಾಡಿದೆ.
ವಿಪಕ್ಷದ ರಾಷ್ಟ್ರೀಯ ವಕ್ತಾರೊಬ್ಬರು ಈ ಕುರಿತು ಟ್ವೀಟ್ ಮಾಡಿದ್ದು, ಐದು ರಾಜ್ಯಗಳ ಚುನಾವಣಾ ಘೋಷಣೆಗೆ ಚುನಾವಣಾ ಆಯೋಗ ಶನಿವಾರ ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿ ಕರೆದಿತ್ತು.ರಾಜಸ್ತಾನದ ಅಜ್ ಮಿರ್ ನಲ್ಲಿ ಪ್ರಧಾನಿಯವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದರು.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ಹೀಗೆ ಪರಸ್ಪರ ಎಷ್ಟೊಂದು ಹೊಂದಾಣಿಕೆಯಿಂದ ಎರಡೂ ವೇಳಾ ಪಟ್ಟಿಗಳು ಬದಲಾಗುತ್ತಿವೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅವರು ಈ ಮುಂದೂಡಿಕೆಗೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ