ಚುನಾವಣಾ ಆಯೋಗದ ಪತ್ರಿಕಾಗೊಷ್ಠಿ ಸಮಯ ಬದಲಾವಣೆಗೆ ಆಕ್ರೋಶ

ನವದೆಹಲಿ

         ಪ್ರಜಾಪ್ರಭುತ್ವದ ಗುರು ಎಂದೇ ಕರೆಲ್ಪಡುವ ಭಾರತದ ಕೇಂದ್ರ ಚುನಾವಣಾ ಆಯೋಗ ಹಾಗೂ ಪ್ರಧಾನ ಮಂತ್ರಿಯವರ ಕಾರ್ಯಕ್ರಮಗಳು ಒಂದೇ ದಿನದಲ್ಲಿ ಎರೆಡೆರಡು ಬಾರಿ ಬದಲಾಗಿರುವುದು ಚುನಾವಣಾ ಆಯೋಗದ ಸಾಚಾತನಕ್ಕೆ ಸಾಕ್ಷಿಯಾಗಿದೆ ಎಂದು ವಿಪಕ್ಷ ಟೀಕೆ ಮಾಡಿದೆ.

           ವಿಪಕ್ಷದ  ರಾಷ್ಟ್ರೀಯ ವಕ್ತಾರೊಬ್ಬರು ಈ ಕುರಿತು ಟ್ವೀಟ್ ಮಾಡಿದ್ದು, ಐದು ರಾಜ್ಯಗಳ ಚುನಾವಣಾ ಘೋಷಣೆಗೆ ಚುನಾವಣಾ ಆಯೋಗ ಶನಿವಾರ ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿ ಕರೆದಿತ್ತು.ರಾಜಸ್ತಾನದ ಅಜ್ ಮಿರ್ ನಲ್ಲಿ ಪ್ರಧಾನಿಯವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದರು.

       ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ಹೀಗೆ ಪರಸ್ಪರ ಎಷ್ಟೊಂದು ಹೊಂದಾಣಿಕೆಯಿಂದ ಎರಡೂ ವೇಳಾ ಪಟ್ಟಿಗಳು ಬದಲಾಗುತ್ತಿವೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅವರು ಈ ಮುಂದೂಡಿಕೆಗೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap