ಕರ್ನೂಲು
ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೆಲವರು ಭಾರಿ ಜನ ಸ್ತೋಮದೊಂದಿಗೆ ಬರುತ್ತಾರೆ ಅಥವಾ ಒಬ್ಬಂಟಿಯಾಗಿ ಬರುತ್ತಾರೆ ಆದರೆ ಇಲ್ಲೋಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅಂಬುಲೆನ್ಸ್ ನಲ್ಲಿ ಬಂದು ಅಚ್ಚರಿ ಮೂಡಿಸಿದ್ದಾರೆ.
ಕಚೇರಿವರೆಗೂ ಆಂಬುಲೆನ್ಸ್ ನಲ್ಲಿ ಬಂದು ನಂತರ ಸ್ಟ್ರೆಚರ್ನಲ್ಲಿ ಕಚೇರಿ ಪ್ರವೇಶಿಸಿ ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಸಿರುವ ಘಟನೆ ನೆರೆಯ ಆಂಧ್ರಪ್ರದೇಶದ ಕರ್ನೂಲಿನಲ್ಲಿ ವರದಿಯಾಗಿದೆ.
ಮಂತ್ರಾಲಯಂ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಟಿಡಿಪಿ ಅಭ್ಯರ್ಥಿ ತಿಕ್ಕಾ ರೆಡ್ಡಿ ಅವರು ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಆಂಬುಲೆನ್ಸ್ನಲ್ಲಿ ಬಂದರು, ನಡೆಯಲು ಸಾಧ್ಯವಾಗದಿದ್ದ ಅವರು ಸ್ಟ್ರೆಚರ್ನಲ್ಲಿಯೇ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ