ದೆಹಲಿ:
ಪೊಲೀಸ್ ಠಾಣೆಗೆ ದೂರು ನೀಡಲು ಬರುವ ಜನರೊಂದಿಗೆ ಮೃದುವಾಗಿ ವಿನಯವಾಗಿ ವರ್ತಿಸಿ ಎಂದು ದೆಹಲಿ ಪೊಲೀಸರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ.
ದೆಹಲಿ ಪೊಲೀಸರಿಗೆ ದೀಪಾವಳಿ ಹಿನ್ನೆಲೆಯಲ್ಲಿ 300 ಹೊಸ ರಾಫ್ತಾರ್ ಮೋಟಾರ್ ಸೈಕಲ್ ನೀಡಿ ಮಾತನಾಡಿದ ಅವರು, ‘ಇಡಿ ದೇಶಕ್ಕೆ ದೆಹಲಿ ಪೊಲೀಸರು ಮಾದರಿಯಾಗಿರಬೇಕು. ಯಾರಾದರೂ ದೂರು ನೀಡಲು ಪೊಲೀಸ್ ಠಾಣೆಗೆ ಬಂದರೇ ಅವರ ಬಳಿ ನಾವು ಏಕೆ ನಮ್ರತೆಯಿಂದ ವರ್ತಿಸಬಾರದು ಎಂದು ಪ್ರಶ್ನಿಸಿದ್ದಾರೆ . ಅವರು ಕಾದು ಕಾದು ಕುಳಿತು ದೂರು ನೀಡುತ್ತಾರೆ. ಅವರಿಗೆ ಒಂದು ಗ್ಲಾಸ್ ನೀರು ಬೇಕೆ ಕೇಳಲು ನಿಮಗೆ ಸಾಧ್ಯವಿಲ್ಲವೇ?’ ಎಂದು ಕೇಳಿದ್ದಾರೆ.