ಭೋಪಾಲ್
ಮೊನ್ನೆ ನಡೆದಿದ್ದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಪಾಕ್ ವಿರುದ್ದ ತೀವ್ರ ಆಕ್ರೋಶ ಭುಗಿಲೆದ್ದಿದ್ದು. ಭಾರತದ ರೈತ ಸಮುದಾಯ ಕೂಡ ಕೈಜೋಡಿಸಿ ಪಾಕಿಸ್ಥಾನಕ್ಕೆ ಆಘಾತ ನೀಡಿದೆ.
ಇನ್ನು ಮುಂದೆ ಪಾಕಿಸ್ತಾನಕ್ಕೆ ಟೊಮೆಟೊವನ್ನು ರಪ್ತು ಮಾಡದಿರಲು ಮಧ್ಯಪ್ರದೇಶ ರೈತರು ನಿರ್ಧರಿಸಿದ್ದಾರೆ . ಮಧ್ಯ ಪ್ರದೇಶದ ಪಶ್ಚಿಮ ಭಾಗದ ಜಬುವಾ ಜಿಲ್ಲೆಯ ಟೊಮೆಟೊ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು. ಆದರೆ ತಮ್ಮ ಟೊಮೆಟೊ ರಫ್ತು ಮಾಡಲು ರೈತರು ನಿರಾಕರಿಸಿರುವ ಹಿನ್ನೆಲೆಯಲ್ಲಿ ರಫ್ತು ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.
ಪೆಟ್ಲವಾಡ್ ಗ್ರಾಮದಲ್ಲಿ ಸುಮಾರು 5 ಸಾವಿರ ರೈತರು ಟೊಮೆಟೊ ಬೆಳೆಯುತ್ತಿದ್ದು, ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಇನ್ನು ಮುಂದೆ ಪಾಕ್ ಗೆ ಟೊಮೆಟೊ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ. ಮೊದಲು ದೆಹಲಿಯಲ್ಲಿನ ಏಜೆಂಟರುಗಳ ಮೂಲಕ ರೈತರು ಪಾಕಿಸ್ತಾನಕ್ಕೆ ರಫ್ತು ಮಾಡಲಾಗುತ್ತಿತ್ತು ಆದರೆ ಇನ್ನು ಮುಂದೆ ಪಾಕ್ ನಾವು ರಪ್ತು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ
ಇನ್ನು ರೈತರ ನಿರ್ಧಾರವನ್ನು ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಶ್ಲಾಘಿಸಿದ್ದು, ಟೊಮೆಟೊ ಬೆಳೆಗಾರರ ದೇಶಪ್ರೇಮವನ್ನು ವರ್ಣಿಸಲು ಪದಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ