ನವದೆಹಲಿ
ರಫೇಲ್ ಡೀಲ್ ತೀರ್ಪು ಬಂದಿದ್ದು ಆಗಿದೆ ವಿಚಾರಣೆ ಮುಗಿದ್ದದೂ ಆಗಿದೆ ಆದರೆ ಕಾಂಗ್ರೇಸಿಗರು ಮಾತ್ರ ಇನ್ನೂ ಹಗಲುಗನಸು ಕಾಣುತ್ತಿದ್ದಾರೆ. ನಾವು ಸುಪ್ರೀಂ ತೀರ್ಪನ್ನು ಒಪ್ಪುವುದಿಲ್ಲ ಮತ್ತು ಇದರ ವಿಸ್ತೃತ ತನಿಖೆಯಾಗಲೆಬೇಕು ಮತ್ತು ಕೇಂದ್ರದ ಮರ್ಯಾದೆ ಗಂಗೆಯಲ್ಲಿ ತೋಯ್ದುಹೋಗಲೆಬೇಕು ಎಂದು ಕನಸುಕಾಣುತ್ತಿದ್ದಾರೆ ಅವರಿಗೆಲ್ಲಾ ನಿಜ ಸ್ಥಿತಿಯಿನ್ನೂ ಸರಿಯಾಗಿ ಅರ್ಥವಾಗಿಲ್ಲ ಏಕೆಂದರೆ ದೇಶದ ಜನ ಅವರ ವಾದವನ್ನು ಕೇಳುವುದನ್ನು ಬಿಟ್ಟು ತುಂಬಾ ದಿನಗಳಾಗಿದೆ ಮತ್ತು ತಮ್ಮ ಮೇಲಿರುವ ಆದಾಯ ವಂಚನೆ ಪ್ರಕರಣದ ತನಿಖೆಗೆ ಸಹಕರಿಸದ ಇವರು ಬೇರೆಯವರ ಮೇಲೆ ಸುಳ್ಳು ಆರೋಪ ಮಾಡುವುದರಲ್ಲಿ ಪಿ ಹೆಚ್ ಡಿ ಪಡೆದಿದ್ದಾರೆ ಎಂದು ಸೀತಾರಾಮನ್ ಕಿಡಿಕಾರಿದ್ದಾರೆ .
ರಫೇಲ್ ವಿಷಯವನ್ನು ನಾವು ಇಲ್ಲಿಗೇ ಬಿಡುವುದಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸೀತಾರಾಮನ್ ಅವರು ಪ್ರತಿಕ್ರಿಯಿಸಿ “ಗಾಂಧಿ ಕುಟುಂಬಕ್ಕೆ ಜಾಣ ಕಿವುಡುತನದ ಸಮಸ್ಯೆ” ಇದೆ. ಇದು ಜಗಜಾಹಿರವಾದ ವಿಚಾರವಾದರು ಜನತೆಯ ಹಾದಿ ತಪ್ಪಿಸುವ ಕೆಲಸಕ್ಕೆ ಗಾಂಧಿ ಕುಟುಂಬ ಕೈ ಹಾಕಿದೆ. ರಫೇಲ್ ಕುರಿತಂತೆ ಜನರ ಮನಸ್ಸಿನಲ್ಲಿ ಸುಳ್ಳಿನ ಬೀಜ ಬಿತ್ತುತ್ತಿದೆ ಮತ್ತು ತಮ್ಮ ಹಯಾಮಿನಲ್ಲಾಗದ ಒಪ್ಪಂದಲ್ಲಿ ಇನ್ನೂ ಪ್ರಗತಿಪರ ಬದಲಾವಣೆ ಮಾಡಿ ಅವರಿಗಿಂತ ಕಡಿ ವೆಚ್ಚದಲ್ಲಿ ವಿಮಾನ ಖರೀದಿ ಮಾಡಲಾಗಿದೆ ಎಂಬ ಹೊಟ್ಟೆ ಉರಿಯಿಂದ ದೇಶವನ್ನು ಪ್ರಗತಿಯ ಪಥದಿಂದ ಹಿಂದೆ ಸೆಳೆಯುವ ಹೀನ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಗುಡುಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ