ಅಮರಾವತಿ:
ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ಚುನಾವಣೆಗಳಲ್ಲಿ ಅತೀ ಕುತೂಹಲಕಾರಿಯಾಗಿರುವುದು ತೆಲಂಗಾಣ ಈ ರಾಜ್ಯದಲ್ಲಿ ಸ್ವಯಂ ಪ್ರೇರಿತವಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ನಿಂತಿರುವ ಟಿ ಆರ್ ಎಸ್ ಒಂದು ಕಡೆಯಾದರೆ ಮತ್ತೆ ತನ್ನ ಅಧಿಕಾರ ಸ್ಥಾಪಿಸಲು ಹವಣಿಸುತ್ತಿರುವ ಕಾಂಗ್ರೇಸ್ ಇನ್ನೊಂದು ಕಡೆಯಿದ್ದರೆ ಚುನಾವಣಾ ಅಖಾಡದಿಂದ ವೈ ಎಸ್ ಆರ್ ಕಾಂಗ್ರೇಸ್ ದೂರ ಉಳಿಯುವುದಾಗಿ ತಿಳಿಸಿದೆ ಎಂದು ಪಕ್ಷದ ಮೂಲಗಳಿಂದ ಧೃಡ ಪಡಿಸಲಾಗಿದೆ.
ಡಿಸೆಂಬರ್ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ನಿರ್ಧರಿಸಿದೆ.
2019ರ ಆಂಧ್ರ ಪ್ರದೇಶದ ಚುನಾವಣೆ ಕಡೆ ಸಂಪೂರ್ಣ ಗಮನಹರಿಸುವುದಕ್ಕಾಗಿ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ 2024ರಲ್ಲಿ ನಡೆಯುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ವೈಎಸ್ ಆರ್ ಕಾಂಗ್ರೆಸ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.