ಹೈದರಾಬಾದ್:
ತೆಲಗು ಚಿತ್ರರಂಗದಲ್ಲಿ ಖ್ಯಾತ ನಟಿ ಮತ್ತು ಟಿಡಿಪಿಯ ಮಾಜಿ ಶಾಸಕಿ ಕೂಡ ಆಗಿರುವ ಶ್ರೀಮತಿ ಜಯಸುಧಾ ತಮ್ಮ ಪುತ್ರ ನಿಹಾರ್ ಕಪೂರ್ ಜೊತೆ ನಿನ್ನೆ ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಹೈದಾರಾಬಾದ್ ನ ಲೋಟಸ್ ಪಾಂಡ್ ನಲ್ಲಿರುವ ಕಛೇರಿಯಲ್ಲಿ ಪಕ್ಷದ ಸಂಸ್ಥಾಪನಾ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಜಯಸುಧಾ ಮತ್ತವರ ಪುತ್ರ ವೈಎಸ್ ಆರ್ ಕಾಂಗ್ರೆಸ್ ಸೇರಿದರು.
ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಬಯಕೆ, ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಇಷ್ಟಪಟ್ಟು ವೈಎಸ್ ಆರ್ ಕಾಂಗ್ರೆಸ್ ಸೇರಿದ್ದೇನೆ ಎಂದು ಜಯಸುಧಾ ಹೇಳಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಸೇರಿರುವುದು ನನಗೆ ಸಂತಸ ತಂದಿದೆ. ವಾಪಸ್ ನನ್ನ ಮನೆಗೆ ಬಂದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ.