ಗುವಾಹಾಟಿ
ಪಾನ್ಬಝಾರ್ ಪ್ರದೇಶದಲ್ಲಿ ಬೆಳಿಗ್ಗೆ ಸುಮಾರು 11:45ರ ವೇಳಗೆ ಲಘು ಸ್ಫೋಟ ಸಂಭವಿಸಿದೆ “ಇದನ್ನು ಬಾಂಬ್ ಸ್ಫೋಟವೆಂದು ಪರಿಗಣಿಸಲಾಗದು,ಯಾಕೆಂದರೆ ಅದರ ತೀವ್ರತೆ ಕಡಿಮೆ ಇದ್ದ ಕಾರಣ ನಾಲ್ವರಿಗೆ ಗಾಯಗಳಾಗಿರುವುದು ವರದಿಯಾಗಿದೆ . ಮೋರಿ ರಿಪೇರಿ ಕಾಮಗಾರಿಗೆಂದು ಇಟ್ಟಿದ್ದ ಮರಳು ಹಾಗು ಕಲ್ಲುಗಳ ಮಧ್ಯದಿಂದ ಸ್ಫೋಟ ಸಂಭವಿಸಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪೋಟಕ್ಕೆ ಸಂಬಂಧಿಸಿಂತೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ . ಈ ಹಿಂದೆ ಕೋಲ್ಕತ್ತದಲ್ಲೂ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಮೃತಪಟ್ಟಿದ್ದರು. ಪೌರತ್ವ ನೋಂದಣಿ ಕರಡುಗಳ ಘೋಷಣೆ ಹಾಗು ಅದರ ನಂತರದ ಪ್ರಕ್ರಿಯೆಗಳ ಕುರಿತಂತೆ ಇಲ್ಲಿನ ಕೆಲ ಸಂಘಟನೆಗಳಿಗೆ ಸಾಕಷ್ಟು ಅಸಮಾಧಾನವಿದ್ದು, ಈ ನಿಟ್ಟಿನಲ್ಲಿ ಅಸ್ಸಾಂ ರಾಜ್ಯಾದ್ಯಂತ ಭದ್ರತಾ ವಿಚಾರವಾಗಿ ಕೇಂದ್ರ ಗೃಹ ಇಲಾಖೆ ಕಣ್ಣಿಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ