ನವದೆಹಲಿ:
ತನ್ನ ರಾಜ್ಯದ ರಾಜಧಾನಿಯನ್ನು ಬದಲಾಯಿಸಿ ಹುಚ್ಚುದೊರೆಯೆಂದೇ ಪ್ರಖ್ಯಾತರಾದ ತುಘಲಖ್’ ಹೆಸರನ್ನು ರಣದೀಪ್ ಸುರ್ಜೇವಾಲಾ ನೆನಪಿಸಿಕೊಂಡಿದ್ದು ನಮ್ಮ ದೇಶದ ಪ್ರಧಾನಿ ಮೋದಿಯವರು ತೇಟ್ ತುಘಲಖ್ ದ್ಬಾರ್ ನಡೆಸುತ್ತಿದ್ದಾರೆ ಮತ್ತು ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಔರಂಗಜೇಬ್’ ಇದ್ದಂತೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಬಲಪಂಥದ ವಿಚಾರಧಾರೆಯ ಸಂಘಟನೆಯಾಗಿರುವ ಹಿಂದೂ ಯುವ ವಾಹಿನಿ ನಿನ್ನೆಯಷ್ಟೇ ಘೊಷಣೆಯೊಂದನ್ನು ಮಾಡಿದೇ. ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಲೆ ಕಡಿದವರಿಗೆ ರೂ.1ಕೋಟಿ ಕೊಡುವುದಾಗಿ ಹೇಳಿದೆ ಎಂದು ತಮ್ಮ ವಾದವನ್ನು ರಣದೀಪ್ ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಂಖಂಡ ರಣದೀಪ್ ಸುರ್ಜೇವಾಲಾ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಹಾಳಾಗಿ ಹೋಗಿದೇ!!!, ಯೋಗಿ ಆದಿತ್ಯನಾಥ್ ಅವರು ಔರಂಗಜೇಬ್ ರೀತಿ ಆಡುತಿದ್ದಾರೆ ಮತ್ತು ನಮ್ಮ ನಾಯಕರನ್ನಾಗಿ ಆರಿಸಿಕೊಂಡಿರುವಂತಹ ಮೋದಿ ಮುಹಮ್ಮದ್ ಬಿನ್ ತುಘಲಕ್ ರಂತೆ ವರ್ತಿಸುತ್ತಿದ್ದಾರೆ ಇದರಿಂದ ದೇಶದ ಘನತೆಗೆ ತೀವ್ರತರದಲ್ಲಿ ಧಕ್ಕೆಯಾಗಿದೆ ಮತ್ತು ನಮ್ಮ ದೇಶದಲ್ಲಿ ಕಾನೂನು ಇದೆಯೇ? ಸಂವಿಧಾನ ರಾಷ್ಟ್ರವನ್ನು ಆಳುತ್ತಿದೆಯೇ ? ಅಥವಾ ಗೂಡಾಗಿರಿಯೇ ರಾಷ್ಟ್ರವನ್ನು ನಡೆಸುತ್ತಿದೆಯೇ ? ಇಂತಹ ಬೆಳವಣಿಗೆಯನ್ನು ನಾವೀಗ ಉತ್ತರ ಪ್ರದೇಶದಲ್ಲಿ ನೋಡುತ್ತಿದ್ದೇವೆಂದು ಕಿಡಿಕಾರಿದ್ದಾರೆ.