ಫರೀದಾಬಾದ್:
ದೇಶದ ಉಕ್ಕು ಉತ್ಪಾದನಾ ವಲಯದ ಟಾಟಾ ಸ್ಟೀಲ್ ಸ್ಟಾಕ್ ಯಾರ್ಡ್ ನ ಹಿರಿಯ ಮ್ಯಾನೇಜರ್ ಆದ ಅರವಿಂದಂ ಅವರಿಗೆ ಕಂಪನಿಯ ಮಾಜಿ ನೌಕರನೊಬ್ಬ ಗುಂಡಿಕ್ಕಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ನೆನ್ನೆ ಮದ್ಯಾಹ್ನ ಸುಮಾರು 1ಗಂಟೆಗೆ ಫರೀದಾಬಾದ್ ಅವರ ಕಚೇರಿಯಲ್ಲಿ ಮ್ಯಾನೇಜರ್ ಅರವಿಂದಮ್ ಪಲ್ ಅವರನ್ನು ಮಾಜಿ ನೌಕರ ವಿಶ್ವನಾಥ್ ಪಾಂಡೆ ಗುಂಡು ಹಾರಿಸಿ ಕೊಂದಿರುವುದನ್ನು ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದೆ .
ಆ ಕೂಡಲೇ ಅರವಿಂದಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಮಾರ್ಗಮಧ್ಯದಲ್ಲಿಯೇ ಅವರು ತೀವ್ರ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಇತ್ತ ಪೊಲೀಸರು ಹೆಚ್ಚಿನ ತನಿಖೆಗಾಗಿ ವಿಶ್ವಾನಾಥನ ಹುಡುಕಲಾಗುತ್ತಿದೆ ಮತ್ತು ಆತನ ಫೋಟೊವನ್ನು ಎಲ್ಲಾ ಠಾಣೆಗಳಿಗೂ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.