ಚಂಢಿಗಡ್:
ಸುಮ್ಮನೆ ಇರಲಾದೆ ಇರುವೆ ಬಿಟುಕೊಂಡರಂತೆ ಎಂಬ ಆಡು ಮಾತಿಗೆ ಸರಿಯಾಗಿ ಚಂಡೀಗಡದ ಒಬ್ಬ ಭಂಡ ಶೂರ ಹುಸಿ ದೈರ್ಯ ಮಾಡಿ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಕೋಟೆಗೆ ಜಿಗಿದು ಸಿಂಹಗಳ ದಾಳಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಛಾಟ್ಬಿರ್ ಮೃಗಾಲಯದಲ್ಲಿ ಈ ಭೀಕರ ಘಟನೆ ನಡೆದಿದೆ. ಭಾನುವಾರ ವ್ಯಕ್ತಿಯೋರ್ವ ನಿಷೇಧಿತ ಪ್ರದೇಶ ಎಂಬ ಸೂಚನಾ ಫಲಕವಿದ್ದರೂ ಭಂಡ ಧೈರ್ಯ ಮಾಡಿ ನಾಲ್ಕು ಸಿಂಹಗಳಿದ್ದ ಬೋನಿನೊಳಗೆ ನುಗ್ಗಿದ್ದಾನೆ ಕೂಡಲೇ ಸಿಂಹಗಳು ಆತನ ಮೇಲೆ ದಾಳಿ ಮಾಡಿವೆ.
ನಂತರ ವ್ಯಕ್ತಿಯ ಚೀರಾಟ ಕಂಡ ಭದ್ರತಾ ಸಿಬ್ಬಂದಿಗಳು ಓಡಿ ಬಂದು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಶತಾಯ ಪ್ರಯತ್ನ ಮಾಡಿ ಸಿಂಹಗಳಿಂದ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ರಾಜ್ಯ ಅರಣ್ಯ ಇಲಾಖೆ ಅಧಿಕಾರಿ ರೋಶನ್ ಸುಂಕರಿಯಾ ಹೇಳಿದ್ದಾರೆ.