ಮೋದಿ ಹೊಗಳಿದ ಮುಲಾಯಂ ಗೆ ಅದ್ಧೂರಿ ಸ್ವಾಗತ!!

ಲಕ್ನೊ:

      ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಉತ್ತರ ಪ್ರದೇಶದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

      ಹೌದು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡುವ ಆಸೆಯಿದೆ ಎಂದು ಬುಧವಾರ ಲೋಕಸಭೆಯಲ್ಲಿ ಮುಲಾಯಂ ಸಿಂಗ್ ಯಾದವ್  ಹೇಳುವ ಮೂಲಕ ವಿರೋಧ ಪಕ್ಷಗಳ ನಾಯಕರಿಗೆ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದ್ದರು.  ಸಂಸತ್ತಿನಲ್ಲಿ ಮೋದಿಯನ್ನು ಹೊಗಳಿದ ನಂತರ ಮುಲಾಯಂಸಿಂಗ್‍ಗೆ ಧನ್ಯವಾದ ಹೇಳುವ ಪೋಸ್ಟರ್ ಗಳು ಲಕ್ನೊ ನಗರದಲ್ಲಿ ರಾರಾಜಿಸುತ್ತಿದೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ : ಎಸ್ಪಿ ನಾಯಕ

      ಮುಲಾಯಂ ಸಿಂಗ್ ಯಾದವ್ ಅವರೇ ಧನ್ಯವಾದಗಳು, ಇಂದು ನೀವು ದೇಶದ 125 ಕೋಟಿ ಭಾರತೀಯರ ಹಾರೈಕೆಯನ್ನು ಪುನರುಚ್ಛರಿಸಿದ್ದೀರಿ ಎಂದು ಹೇಳುವ ಪೋಸ್ಟರ್ ಗಳು ಲಕ್ನೊ ನಗರದಲ್ಲಿ ರಾರಾಜಿಸುತ್ತಿವೆ.

     ಮುಲಾಯಂ ರವರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ತಲ್ಲಣ ಎಬ್ಬಿಸಿದ್ದರೆ, ಇತ್ತ ಉತ್ತರ ಪ್ರದೇಶದಲ್ಲಿ ಬಿಜೆಪಿ ಬೆಂಬಲಿಗರು, ಪೋಸ್ಟರ್ ಗಳನ್ನು ಹಾಕಿ ಮುಲಾಯಂ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap