ಕಣಿವೆಗೆ ಉರುಳಿದ ಬಸ್ : 11 ಜನರ ದುರ್ಮರಣ!

ಶ್ರೀನಗರ:

      ಚಾಲಕನ ನಿಯಂತ್ರಣ ತಪ್ಪಿ ಬಸ್‌ವೊಂದು ರಸ್ತೆ ಬದಿಯಲ್ಲಿ ಜಾರಿ ಆಳದ ಕಣಿವೆಯೊಳಕ್ಕೆ  ಬಿದ್ದು ಕನಿಷ್ಠ 11 ಮಂದಿ ಸಾವಿಗೀಡಾಗಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. 

      ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 175 ಕಿ.ಮೀ. ದೂರದಲ್ಲಿರುವ ಪೂಂಚ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು,  ಲೊರಾನ್‌ನಿಂದ ಪೂಂಚ್‌ ಕಡೆಗೆ ಸಾಗುತ್ತಿದ್ದ ಜೆಕೆ02ಡಬ್ಲ್ಯು 0445 ಬಸ್‌ ಪ್ಲೆರಾ ಬಳಿ ದುರಂತಕ್ಕೆ ಈಡಾಗಿದೆ.

      ಕಮರಿಗೆ ಜಾರಿರುವ ಬಸ್‌ ಕೆಳಗಿನ ನದಿ ತೀರಕ್ಕೆ ಬಂದು ಬಿದ್ದಿದ್ದು, ಬಹುತೇಕ ನಜ್ಜುಗುಜ್ಜಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಡಿ ಉಪ–ವಿಭಾಗದ ಆಸ್ಪತ್ರೆಗೆ ಸಾಗಿಸಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap