ಬೆಳಗಾವಿ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕಾರು ಇಂದು ಮಧ್ಯಾಹ್ನ ಅಪಘಾತಕ್ಕೀಡಾಗಿದೆ.
ಧರ್ಮನಾಥ ಸರ್ಕಲ್ ಬಳಿ ಜಗದೀಶ್ ಶೆಟ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹೊಟೇಲ್ನಿಂದ ಸುವರ್ಣ ಸೌಧಕ್ಕೆ ತೆರಳುತ್ತಿದ್ದ ವೇಳೆ ಶೆಟ್ಟರ್ ಅವರ ಕಾರಿಗೆ ಹಿಂದಿನಿಂದ ಇನ್ನೊವಾ ಕಾರೊಂದು ಬಂದು ಗುದ್ದಿದೆ. ಸದ್ಯ ಅಪಘಾತದಿಂದ ಜಗದೀಶ್ ಶೆಟ್ಟರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ