ತುಮಕೂರು:
ನಾಳೆಯಿಂದ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನೇತೃತ್ವದ ವೈದ್ಯರ ತಂಡವು ಸಿದ್ಧಗಂಗಾ ಶ್ರೀಗಳ ಆರೋಗ್ಯ ತಪಾಸಣೆಯನ್ನು ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಸಲಹೆ ನೀಡಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿ ಅವರ ಅರೋಗ್ಯ ವಿಚಾರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆಯನ್ನು ಶುಕ್ರವಾರ ನಡೆಸಲಿದೆ. ಶ್ರೀಗಳು ಬೇಗ ಗುಣಮುಖರಾಗುವ ವಿಶ್ವಾಸವಿದೆ. ಮಗುವಿಗೆ ತಾಯಿ ಅರೈಕೆ ಮಾಡಿದ ಹಾಗೆ ಸ್ವಾಮೀಜಿ ಅವರನ್ನು ಡಾ.ಪರಮೇಶ್ ಅವರು ಉತ್ತಮ ಆರೈಕೆ ಮಾಡುತ್ತಿದ್ದಾರೆ ಎಂದರು.
ಶ್ರೀಗಳಿಗೆ ಆಲ್ಬಮಿನ್ ಕೊರತೆ:
ಶ್ರೀಗಳ ದೇಹದಲ್ಲಿ ಅಲ್ಬಮಿನ್ ಉತ್ಪತ್ತಿಯಾಗುತ್ತಿಲ್ಲ. ಹಾಗಾಗಿ, ಹೊರಗಿನಿಂದ ಅಲ್ಬಮಿನ್ ಪ್ರೋಟಿನ್ ನೀಡುತ್ತಿದ್ದೇವೆ. ಶ್ರೀಗಳ ದೇಹದಲ್ಲಿ ಈಗ 3.1 ಅಲ್ಬಮಿನ್ ಅಂಶ ಇದೆ. ಅಲ್ಬಿಮಿನ್ ಕಡಿಮೆಯಾದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಶ್ರೀಗಳ ವೈದ್ಯ ಆಪ್ತವೈದ್ಯ ಡಾ. ಪರಮೇಶ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದರು.
ಈ ವೇಳೆ ಆರೋಗ್ಯ ಸಚಿವರಿಗೆ, ಮಾಜಿ ಸಚಿವ ಸೊಗಡು ಶಿವಣ್ಣ, ಆರೋಗ್ಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ