ಚಿಕ್ಕಬಳ್ಳಾಪುರ:
ಕ್ಯಾಂಟರ್ ವಾಹನದಲ್ಲಿ ಪಾನ್ ಮಸಾಲಾ ಮಾಲನ್ನು ಸಾಗಿಸುತ್ತಿದ್ದ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನನ್ನು ಕೊಲೆಗೈದ ದುಷ್ಕರ್ಮಿಗಳು ಪಾನ್ಮಸಾಲಾ ಮಾಲ್ಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಚಾಲಕ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ನಿವಾಸಿ ರಸೂಲ್ ಸಾಬಿ ಹತ್ಯೆಗೀಡಾದ ಚಾಲಕ. ಆಂಧ್ರದ ಅನಂತಪುರ ಜಿಲ್ಲೆಯ ರಾಯ್ಪುಡು ಗ್ರಾಮದ ಬೆಂಗಳೂರು-ಹೈದರಾಬಾದ್ ಹೆದ್ದಾರಿ ಬಳಿ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕ ರಸೂಲ್ ಸಾಬಿಯ ಕೈಕಾಲು ಕಟ್ಟಿ, ಹಲ್ಲೆ ಮಾಡಿ ನಂತರ ಕೊಲೆಗೈದು ರಸ್ತೆ ಬದಿಯಲ್ಲೇ ಎಸೆದಿದ್ದಾರೆ.
ವಾಹನದಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಪಾನ್ಮಸಾಲಾ ಮಾಲು ಇತ್ತೆಂದು ತಿಳಿದುಬಂದಿದೆ. ಆ ಪಾನ್ಮಸಾಲಾವನ್ನು ಕ್ಯಾಂಟರ್ನಿಂದ ಕಿಡಿಗೇಡಿಗಳು ತಮ್ಮ ವಾಹನಕ್ಕೆ ಹಾಕುತ್ತಿರುವಾಗ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರ ಮೇಲೆ ಕೂಡ ಹಲ್ಲೆ ನಡೆಸಿದ್ದಲ್ಲದೆ, ಆ ಕ್ಯಾಂಟರ್ನ್ನೂ ಅಪಹರಿಸಿದ್ದಾರೆ ಎನ್ನಲಾಗಿದೆ. ರಾಯ್ಪುಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ