ಪಾನ್ ಮಸಾಲಾಗಾಗಿ ನಡೆದದ್ದು ಕೊಲೆ!!!

ಚಿಕ್ಕಬಳ್ಳಾಪುರ:  

     ಕ್ಯಾಂಟರ್ ವಾಹನದಲ್ಲಿ ಪಾನ್ ಮಸಾಲಾ ಮಾಲನ್ನು ಸಾಗಿಸುತ್ತಿದ್ದ  ಚಾಲಕನ ಮೇಲೆ ಹಲ್ಲೆ ನಡೆಸಿ, ಆತನನ್ನು ಕೊಲೆಗೈದ ದುಷ್ಕರ್ಮಿಗಳು ಪಾನ್​ಮಸಾಲಾ ಮಾಲ್​ಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. 

      ಚಾಲಕ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ನಿವಾಸಿ ರಸೂಲ್​ ಸಾಬಿ ಹತ್ಯೆಗೀಡಾದ ಚಾಲಕ. ಆಂಧ್ರದ ಅನಂತಪುರ ಜಿಲ್ಲೆಯ ರಾಯ್ಪುಡು ಗ್ರಾಮದ ಬೆಂಗಳೂರು-ಹೈದರಾಬಾದ್​ ಹೆದ್ದಾರಿ ಬಳಿ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕ ರಸೂಲ್​ ಸಾಬಿಯ ಕೈಕಾಲು ಕಟ್ಟಿ, ಹಲ್ಲೆ ಮಾಡಿ ನಂತರ ಕೊಲೆಗೈದು ರಸ್ತೆ ಬದಿಯಲ್ಲೇ ಎಸೆದಿದ್ದಾರೆ.

       ವಾಹನದಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಪಾನ್​ಮಸಾಲಾ ಮಾಲು ಇತ್ತೆಂದು ತಿಳಿದುಬಂದಿದೆ. ಆ ಪಾನ್​ಮಸಾಲಾವನ್ನು ಕ್ಯಾಂಟರ್​ನಿಂದ ಕಿಡಿಗೇಡಿಗಳು ತಮ್ಮ ವಾಹನಕ್ಕೆ ಹಾಕುತ್ತಿರುವಾಗ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರ ಮೇಲೆ ಕೂಡ ಹಲ್ಲೆ ನಡೆಸಿದ್ದಲ್ಲದೆ, ಆ ಕ್ಯಾಂಟರ್​ನ್ನೂ ಅಪಹರಿಸಿದ್ದಾರೆ ಎನ್ನಲಾಗಿದೆ. ರಾಯ್ಪುಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap