ತುಮಕೂರು : 6.50 ಲಕ್ಷ ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ ಪ್ರಾಮಾಣಿಕ ಕಂಡಕ್ಟರ್!!

ತುಮಕೂರು:

      ಪ್ರಯಾಣಿಕರೊಬ್ಬರು ಬಸ್‌ನಲ್ಲೇ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಬಸ್ ಕಂಡಕ್ಟರ್ ವಾಪಸ್ ನೀಡುವುದರ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ತುಮಕೂರಿನಲ್ಲಿ ನಡೆದಿದೆ.

ಘಟನೆಯ ವಿವರ:

     ಪಾವಗಡ ನಿವಾಸಿ ನಾಗಲತಾ ಬರೋಬ್ಬರಿ 6.50 ಲಕ್ಷ ಮೌಲ್ಯದ ಒಡವೆಯ ವ್ಯಾನಿಟಿ ಬ್ಯಾಗನ್ನು ನಿನ್ನೆ ರಾತ್ರಿ ಪಾವಗಡದಿಂದ ಬೆಂಗಳೂರಿಗೆ ಹೋಗುವಾಗ ಬಸ್‌ನಲ್ಲೇ ಮರೆತು ಇಳಿದು ಹೋಗಿದ್ದಾರೆ.

      ಇದೇ ವೇಳೆ ಡಿಪೋಗೆ ಬಸ್​​​ ಹಿಂತಿರುಗಿ ಬಂದಾಗ ಶಿರಾ ಡಿಪೋ‌ ವ್ಯಾಪ್ತಿಯ ಕಂಡಕ್ಟರ್ ಶ್ರೀಧರ್‌ ಬಸ್ ನಲ್ಲಿ ಸಿಕ್ಕ ಬ್ಯಾಗ್ ಅನ್ನು ನೋಡಿ ಡಿಪೋಗೆ ಬ್ಯಾಗ್ ತಂದು ಮೇಲಧಿಕಾರಿಗಳ ಗಮನಕ್ಕೆ ತಂದು, ಪೋಲಿಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಚಿನ್ನವನ್ನು ಕಳೆದುಕೊಂಡ ನಾಗಲತಾ ಅವರಿಗೆ ತಲುಪಿಸಿದ್ದಾರೆ. 

ಸಾರ್ವಜನಿಕರ ಪ್ರಶಂಸೆ:

     ಇನ್ನೂ ಬಸ್ ಕಂಡಕ್ಟರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap