ಉಪತಹಸೀಲ್ದಾರ್ ವಿರುದ್ದ ಕ್ರಮಕ್ಕೆ ಆಗ್ರಹ

ಪಾವಗಡ:

ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಉಪತಹಸೀಲ್ದಾರ್ ವಿರುದ್ದ ತಹಸೀಲ್ದಾರ್ ಕೆ.ಆರ್.ನಾಗರಾಜುರವರಿಗೆ ಮನವಿ ಪತ್ರ ಸಲ್ಲಿಸುತ್ತಿರುವುದು.

       ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್‍ರವರ ಸಾರ್ವಜನಿಕರೊಂದಿಗಿನ ಅನುಚಿತ ವರ್ತನೆ, ವಿನಾಕಾರಣ ಅರ್ಜಿಗಳ ವಜಾದಿಂದ ಬೇಸತ್ತ ರೈತರು ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿರುವ ಗ್ರೇಡ್2 ತಹಸೀಲ್ದಾರ್ ಸುಮತಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವÀರ್ತಿಸುತ್ತಾ, ಸಾರ್ವಜನಿಕರಿಗೆ ಸೌಜನ್ಯಕ್ಕೂ ಗೌರವ ನೀಡುವುದಿಲ್ಲ. ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡದೆ, ಯಾವುದೋ ಒಂದು ನೆಪವೊಡ್ಡಿ ಅರ್ಜಿಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಇವರನ್ನು ಈ ತಕ್ಷಣವೇ ತಹಸೀಲ್ದಾರ್ ಕಚೇರಿಯಿಂದ ಹೊರ ಹಾಕುವಂತೆ ಒತ್ತಾಯಿಸಿದರು.

ಸಿಐಟಿಯು ತಾ.ಅಧ್ಯಕ್ಷೆ ಸುಶೀಲಮ್ಮ ಮಾತನಾಡಿ, ಗ್ರೇಡ್2 ತಹಸೀಲ್ದಾರ್ ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಜನ್ಯಕ್ಕೂ ಕೂಡ ಗೌರವ ನೀಡುವುದೇ ಅವರಿಗೆ ಗೊತ್ತಿಲ್ಲ. ಇವರು ನಮ್ಮ ತಾಲ್ಲೂಕಿನ ಗ್ರೇಡ್2 ತಹಸೀಲ್ದಾರ್ ಆಗಿರುವುದು ನಮ್ಮ ದುರಂತ.
ಕೋವಿಡ್ ಸಂಕಷ್ಟ ಸಮಯದಲ್ಲಿ ಸತತವಾಗಿ ಮೂರು ವರ್ಷಗಳಿಂದ ತಾಲ್ಲೂಕು ಆಡಳಿತದ ಜೊತೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕುಟುಂಬಗಳನ್ನೆ ಬದಿಗೊತ್ತಿ ಕೇಲಸ ಮಾಡಿದ್ದಾರೆ. ಪಾವಗಡ ಒಂದು ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು, ಇಲ್ಲಿನ ಜನತೆಗೆ ತೊಂದರೆ ನೀಡುವಂತಿದ್ದರೆ ಮೊದಲು ನೀವು ಜಾಗಖಾಲಿ ಮಾಡಿ, ಇಲ್ಲವೆ ಬಡಜನತೆಗೆ ನ್ಯಾಯಯುತ ಸೌಲಭ್ಯ ನೀಡಿ ಎಂದರು.
ತಹಸೀಲ್ದಾರ್ ಕೆ.ಆರ್.ನಾಗರಾಜು ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಮುಂದೆ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮಹಿಳಾ ಮುಖಂಡರಾದ ಅನ್ನಪೂರ್ಣಮ್ಮ, ಕಾರ್ಯದರ್ಶಿ ಕೆ.ಶಿವರಾಜು, ಮೋಹನ್, ನಡುಪನ್ನ, ಗುಡಿಪಲ್ಲೆಪ್ಪ, ಪೂಜಾರಿ ಚಿತ್ತಯ್ಯ, ನಾರಾಯಣಪ್ಪ, ಅಶ್ವತ್ಥಪ್ಪ, ನರಸಪ್ಪ, ಸದಾಶಿವಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link