ಶಿಗ್ಗಾವಿ :
ಪಟ್ಟಣದಲ್ಲಿ ತಾಲೂಕಾ ಆಡಳಿತದಿಂದ ಇದೇ ತಿಂಗಳು ಅ. 23 ರಂದು ವೀರರಾಣಿ ಕಿತ್ತೂರಾಣಿ ಚನ್ನಮ್ಮನವರ ಜಯಂತ್ಯೋತ್ಸವವನ್ನು ಆಚರಿಸಲಿದ್ದು ಅದರ ಪೂರ್ವಭಾವಿ ಸಿದ್ದತಾ ಸಭೆಯನ್ನು ಇದೇ ಅ.12 ರಂದು ಶುಕ್ರವಾರ ಮದ್ಯಾಹ್ನ 3 ಘಂಟೆಗೆ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಆಯೊಜಿಸಿದ್ದು ಸಮಾಜದ ಎಲ್ಲ ಮುಖಂಡರು, ತಾಲೂಕಿನ ಸಂಘ ಸಂಸ್ಥೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು ಭಾಗವಹಿಸಿ ಜಯಂತ್ಯೋತ್ಸವ ಆಚರಣೆ ಕುರಿತು ಸಲಹೆ ಸೂಚನೆ ನೀಡಬೇಕೆಂದು ತಾಲೂಕಾ ಪಂಚಮಸಾಲಿ ಸಮಾಜದ ಅದ್ಯಕ್ಷ ಶಿವಾನಂದ ಬಾಗೂರ ಪ್ರಕಟಣೆಗೆ ತಿಳಿಸಿದ್ದಾರೆ.