ತುಮಕೂರು
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ರವರು ತಿಪಟೂರಿನ ನೊಣವಿನಕೆರೆ ಸಂತೆಯಲ್ಲಿ ಸಾರ್ವಜನಿಕರ ಬಳಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ತಿಪಟೂರು ಶಾಸಕರಾದ ಬಿ.ಸಿ. ನಾಗೇಶ್ ರವರು ಅವರ ಜೊತೆ ಮತಯಾಚನೆಯಲ್ಲಿ ತೊಡಗಿ ಮಾತನಾಡುತ್ತಾ, ಮೋದಿ ರವರನ್ನು ಮತ್ತೊಮ್ಮೆ ಪ್ರಧಾನಿಯಾದರೆ ಮಾತ್ರ ಊಳಿಗಾಲ ಇಲ್ಲವಾದಲ್ಲಿ ರಾಷ್ಟ್ರ ವಿರೋಧಿಗಳು ಒಂದುಗೂಡಿ ಆಧಿಕಾರದ ದಾಹಕ್ಕಾಗಿ ಈ ದೇಶವನ್ನು ಮಾರಲು ಹಿಂಜರಿಯುವುದಿಲ್ಲ,
ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಶುಭ್ರ ವಸ್ತ್ರದಂತೆ ಆಡಳಿತ ನೀಡಿರುವ ಪ್ರಧಾನಿ ನರೇಂದ್ರ ಮೋದಿರವರು ವಿಶ್ವದ ನಾಯಕರಾಗಿದ್ದಾರೆ ಇವರ ನಾಯಕತ್ವದಲ್ಲಿ ಭಾರತವನ್ನು ವಿಶ್ವಗುರು ಮಾಡೋಣ ಮತ್ತೆ ಮೋದಿರವರನ್ನು ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸಿ ಬಸವರಾಜ್ರವರನ್ನು ಗೆಲ್ಲಿಸಿ ಎಂದು ಸಾರ್ವಜನಕರಲ್ಲಿ ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
