ಕುದೂರು:
ಮಾಗಡಿ ತಾಲ್ಲೂಕು ಕುದೂರು ಜಿಲ್ಲಾ ಪಂಚಾಯತ್ ಉಪಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಬಂದಿದ್ದ ಬಿಜೆಪಿ ಅಭ್ಯರ್ಥಿ ಮೇಲೆ ಜೆಡಿಎಸ್ ಶಾಸಕರು ದರ್ಪ ನಡೆಸಿದ ಪ್ರಸಂಗ ನಡೆದಿದೆ.
ತೆರವಾಗಿದ್ದ ಕುದೂರು ಜಿಲ್ಲಾಪಂಚಾಯತ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು ಅಧಿಕೃತ ಘೋಷಣೆ ಹೊರಡಿಸಲಾಗಿದ್ದು, ಈ ಕಾರಣದಿಂದಾಗಿ ಸದರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಲು ಬಂದಿದ್ದ ಬಿಜೆಪಿ ಅಭ್ಯರ್ಥಿ ಕುಮಾರ್ ಎಂಬುವವರ ಮೇಲೆ ಮಾಗಡಿ ಶಾಸಕ ಎ.ಮಂಜುನಾಥ್ ಅವರು, ನಾಮಪತ್ರ ಸಲ್ಲಿಸದಂತೆ ತಾಕೀತು ಮಾಡಿ ಅವರ ಮೇಲೆ ದರ್ಪ ನಡೆಸಿದ್ದಾರೆ.
