ಮೈದಾನದ ತುಂಬ ಕಸದ ರಾಶಿ: ಸ್ವಚ್ಛಗೊಳಿಸಿದ ಶಾಸಕ

ಹೊನ್ನಾಳಿ:

                                             ನ್ಯಾಮತಿ : ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಶಾಸಕ ಎಂ.ಪಿ.ರೇಣುಕಾಚಾರ್ಯ ಪೊರಕೆ ಹಿಡಿದು ಮೈದಾನ ಸ್ವಚ್ಚಗೊಳಿಸುವ ಮೂಲಕ ಗಮನ ಸೆಳೆದರು..
ಹೌದು ಪಟ್ಟಣದ ಬಾಲಕಿಯ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಕೊರೊನಾ ವಾರಿಯರ್ಸಗಳಿಗೆ ಅಭಿನಂದನಾ ಸಮಾರಂಭದ ಜೊತೆಗೆ, ಹೋಳಿಗೆ ಊಟದ ವ್ಯವಸ್ಥೆಯನ್ನು ರೇಣುಕಾಚಾರ್ಯ ಮಾಡಿಸಿದ್ದರು..

ಕೊರೊನಾ ವಾರಿಯರ್ಸ ಸೇರಿದಂತೆ 15 ಸಾವಿರ ಜನರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ರೇಣುಕಾಚಾರ್ಯ ಮಾಡಿಸಿದ್ದರಿಂದ ಮೈದಾನದ ತುಂಬೆಲ್ಲಾ ಕಸದ ರಾಶಿ ತುಂಬಿಕೊಂಡಿತ್ತು.
ಇದನ್ನು ಕಂಡ ರೇಣುಕಾಚಾರ್ಯ ಖುದ್ದು ಪೊರಕೆ ಹಿಡಿದು, ಇಡೀ ಮೈದಾನವನ್ನು ಸ್ವಚ್ಚಗೊಳಿಸಿದರಲ್ಲದೇ, ಖುದ್ದು ತಾವೇ ಕಸತುಂಬುವ ಮೂಲಕ ಗಮನ ಸೆಳೆದರು.

ರೇಣುಕಾಚಾರ್ಯರಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿ, ಶಾಲಾ ಆವರಣವನ್ನು ಸ್ವಚ್ಚಗೊಳಿಸಿದರು.
ಒಬ್ಬ ರಾಜಕಾರಣಿ ಹೇಗಿರ ಬೇಕು ಎಂಬುದನ್ನು ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತೋರಿಸಿಕೊಟ್ಟಿದ್ದು, ಈ ಮೂಲಕ ಸ್ವಚ್ಚ ಭಾರತದ ಸಂದೇವನ್ನು ರೇಣುಕಾಚಾರ್ಯ ಸಾರಿದ್ದಾರೆ..
ಈ ಸಂದರ್ಭ ಎಸ್‍ಸಿ ಮೋರ್ಚ ತಾಲೂಕು ಅಧ್ಯಕ್ಷ ಉಮೇಶ್, ಸುರಹೊನ್ನೆ ಗ್ರಾ.ಪಂ.ಅಧ್ಯಕ್ಷ ಹಾಲೇಶ್, ಮುಖಂಡರಾದ ಸಿ.ಕೆ.ರವಿ, ಬಿ.ಕೆ.ಕರಿಬಸಪ್ಪ, ಪ್ರವೀಣ್, ಶಶಿ ಚನ್ನಗಿರಿ ಸೇರಿದಂತೆ ಮತ್ತೀತತರಿದ್ದರು.

Recent Articles

spot_img

Related Stories

Share via
Copy link