ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ ಹಾಗೂ ಸ್ಪಂದನ ಯೋಜನೆ ಕುರಿತು ಕಾರ್ಯಗಾರ ಯಶಸ್ವಿ

ಬಳ್ಳಾರಿ

      ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ ಹಾಗೂ ಸ್ಪಂದನ ಯೋಜನೆಯ ಕುರಿತ ಕಾರ್ಯಗಾರವನ್ನು ನಗರದ ಗುಗ್ಗರಹಟ್ಟಿಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರವನ್ನು ಡಿಡಿಪಿಐ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಶ್ರೀಧರನ್ ಅವರು ಉದ್ಘಾಟಿಸಿ ಮಾತನಾಡಿದರು.

    ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಚಂದ್ರನಾಯ್ಕ್ ಅವರು ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ ಮತ್ತು ಸ್ಪಂದನ ಯೋಜನೆಯ ಕುರಿತು ಹಾಗೂ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಸಂಬಂಧಿಸಿದಂತೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ವಿವರವಾಗಿ ತಿಳಿಸಿದರು.

     ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಸುರೇಶ್ ಬಾಬು, ಬೋಧಕ ಸಿಬ್ಬಂದಿಗಳಾದ ಕೆ.ಅಜೀತ್ ಸಿಂಗ್, ಟಿ.ವನಜಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಈ ಕಾರ್ಯಾಗಾರವು ಎರಡು ದಿನಗಳ ಕಾಲ ನಡೆಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link