ಸಂಚಲನ ಸೃಷ್ಠಿಸಿದ ಅಜಿತ್ ಪವಾರ್ ಹೇಳಿಕೆ..!

ಮುಂಬೈ:

     ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ರಾಜಕೀಯವು ದಿನದಿಂದ ದಿನಕ್ಕೆ ಹೊಸ  ತಿರುವು ಪಡೆಯುತ್ತಿದೆ ಹೀಗಿರುವಾಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೊಟ್ಟ ಒಂದು ಹೇಳಿಕೆ ಸಂಚಲನ ಸೃಷ್ಠಿಸಿದೆ. 

     ಶರದ್‌ ಪವಾರ್ ಅವರೇ ನಮ್ಮ ನಾಯಕ ಮತ್ತು ನಾನು ಎನ್‌ಸಿಪಿಯಲ್ಲೇ ಇರುತ್ತೇನೆ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಹೇಳಿದ್ದಾರೆ.ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಜಿತ್ ಪವಾರ್ ಸರಣಿ ಟ್ವೀಟ್ ಗಳ ಮೂಲಕ, ಶರದ್‌  ಪವಾರ್ ಎಂದಿಗೂ ತಮ್ಮ ನಾಯಕರಾಗಿರುತ್ತಾರೆ. ತಾವು ಎನ್‌ಸಿಪಿಯನ್ನು ಬಿಡುವ ಮಾತೆ ಇಲ್ಲಾ ಎಂದು ತಿಳಿಸಿದ್ದಾರೆ. 

    ಬಿಜೆಪಿಗೆ ಬೆಂಬಲ ನೀಡಿರುವುದನ್ನು ಸಮರ್ಥಿಸಿಕೊಂಡ ಅವರು, ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಸ್ಥಾಪನೆ ಅಗತ್ಯವಿರುವು ದರಿಂದ ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ. ಮುಂದಿನ ಐದು ವರ್ಷ ಮೈತ್ರಿ ಸರ್ಕಾರ ಪ್ರಾಮಾಣಿಕವಾಗಿ ಬಡವರ, ರೈತರ, ಹಿಂದುಳಿದವರ ಮತ್ತು ಮಹಾರಾಷ್ಟ್ರ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link