ನಟ ಅರ್ಜುನ್‍ಸರ್ಜಾರನ್ನು ಬಿಡದ ‘ಮೀ ಟೂ’ ಬಿಸಿ

ಬೆಂಗಳೂರು: 

          ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ #MeToo ಆರೋಪಗಳು ಒಂದೊಂದಾಗಿಯೇ ಹೊರಬರುತ್ತಿದೆ. ಸಂಜನಾ ಗಲ್ರಾಣಿಯ ಬೆನ್ನಲ್ಲೇ ನಟಿ ಶೃತಿ ಹರಿಹರನ್ ಅವರು ಇಂದು ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರು ಶೃತಿ ಹರಿಹರನ್ ವಿರುದ್ಧ ಕಿಡಿಕಾರಿದ್ದಾರೆ.

 

  ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ವಿರುದ್ದ ನಟಿ ಶ್ರುತಿಹರಿಹರನ್ ಅವರು ಮೀ ಟೂ ಬಿಸಿ ಆರೋಪ ಮಾಡಿದ್ದಾರೆ. ಮ್ಯಾಗಜಿನ್ ಒಂದಕ್ಕೆ ಹೇಳಿಕೆ ನೀಡಿರುವ ಅವರು, ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ನನ್ನೊಂದಿಗೆ ಮಿತಿಮೀರಿ ಅಸಭ್ಯವಾಗಿ ವರ್ತಿಸಿದರು.

 ‘ವಿಸ್ಮಯ’ ಎಂಬ ಚಲನಚಿತ್ರದಲ್ಲಿ ಅವರ ಹೆಂಡತಿಯಾಗಿ ನಾನು ಪಾತ್ರ ನಿರ್ವಹಿಸುತ್ತಿದ್ದೆ, ಚಿತ್ರದ ರಿಹರ್ಸಲ್‍ಗೆ ನನ್ನನ್ನು ಕರೆಯುತ್ತಿದ್ದರು. ಹಾಗಾಗಿ ನಾನು ಅವರೊಂದಿಗೆ ರಹರ್ಸಲ್ ಮಾಡುವ ವೇಳೆ ಹೀಗೆ ಮಾಡಿದರೆ, ಹೇಗೆ ಎಂದು ಹೇಳಿ, ನನ್ನನ್ನು ಜೋರಾಗಿ ಬಿಗಿಯಾಗಿ ತಬ್ಬಿಕೊಂಡರು. ಇದರಿಂದ ನಾನು ತಬ್ಬಿಬ್ಬಾದೆ. ತಕ್ಷಣ ನಿರ್ದೇಕರಲ್ಲಿಗೆ ಹೋಗಿ ಇನ್ನು ಮುಂದೆ ರಿಹರ್ಸಲ್‍ಗೆ ಬರುವುದಿಲ್ಲ ಎಂದು ಹೇಳಿ, ಸಿನಿಮಾ ಶೂಟಿಂಗ್ ವೇಳೆ ಮಾತ್ರ ನಾನು ಭಾಗವಹಿಸುತ್ತಿದ್ದೆ ಎಂದು ಹೇಳಿದರು.

ಕಪ್ಪು ಮಸಿಬಳಿಯು ಯತ್ನ

ಶ್ರುತಿಹರಿಹರನ್ ಅವರು ತನ್ನ ಅಳಿಯ ಅರ್ಜುನ್ ಸರ್ಜಾ ವಿರುದ್ದ ಮಾಡಿರುವ ಆರೋಪ ಸುಳ್ಳು ಎಂದು ಕನ್ನಡದ ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರು ಹೇಳಿದ್ದಾರೆ.

ನಟ ಅರ್ಜುನ್ ಸರ್ಜಾ ಅವರು ವಯಸ್ಸಿನಲ್ಲಿರುವಾಗಲೇ ಮಾಡದ ಈ ರೀತಿಯ ತಪ್ಪನ್ನು ಈಗ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು. ತಮ್ಮನ್ನು ತಾವು ತೂಡಗಿಸಿಕೊಂಡಿರುವ ಚಿತ್ರರಂಗದಲ್ಲಿ ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಕೂಡಾ ಅವರಿಗೆ ಅಂಟಿಲ್ಲ. ಆದರೆ, ಈಗ ಮಾತ್ರ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ.

ಆಗೇನಾದರೂ ಅವರಿಂದ ಒಂದು ವೇಳೆ ತಪ್ಪು ಆಗಿದ್ದಲ್ಲಿ ಆಗಲೇ ಅವರ ವಿರುದ್ದ ಶೃತಿಹರಿಹರನ್ ಅವರು ಹೇಳಿಕೆ ನೀಡಬಹುದಿತ್ತಲ್ಲ. ಈಗ ಹೇಳಿಕೆ ನೀಡಿ ಸರ್ಜಾ ವಿರುದ್ದ ಆರೋಪಿಸಿ,ಅವರ ವೃತ್ತಿ ಜೀವನಕ್ಕೆ ಮಸಿ ಬಳಿಯುವ ಯತ್ನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾನನಷ್ಟ ಮೊಕದ್ದಮ್ಮೆ;

ನನ್ನ ಅಳಿಯ ಅರ್ಜುನ್‍ಸರ್ಜಾ ಅವರ ವಿರುದ್ದ ನಟಿ ಶ್ರುತಿ ಹರಿಹರನ್ ಅವರು ಮಾಡಿರುವ ಆರೋಪದ ವಿರುದ್ದ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಅತ್ತೆ ಪಾರ್ವತಮ್ಮ ತಿಳಿಸಿದ್ದಾರೆ.

ಘಟನೆ ನಡೆದ ಮರುದಿನವೇ ಮಾಡದ ಆರೋಪವನ್ನು ಈಗ ಆರೋಪಿಸಲು ಕಾರಣವೇನು? ನನ್ನ ಅಳಿಯ ಅರ್ಜುನ್ ಸರ್ಜಾ ಅವರು ದೇವರಂತಾ ಮನುಷ್ಯ ಅಂತಹವರ ವಿರುದ್ದ ಆರೋಪ ಮಾಡಿರುವುದು ಸರಿಯಲ್ಲ. ಕುಟುಂದವರೆಲ್ಲರೂ ಸೇರಿ ಶ್ರುತಿ ಹರಿಹರನ್ ವಿರುದ್ದ ಮಾನನಷ್ಟ ಮೊಕದ್ದಮ್ಮೆ ಹೂಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಶ್ರುತಿಹರಿಹರನ್ ಆರೋಪದಿಂದ ನೋವಾಗಿದೆ

ನಟಿ ಶ್ರುತಿಹರಿಹರನ್ ಅವರು ಮಾಡಿರುವ ಆರೋಪದಿಂದ ನನಗೆ ನೋವಾಗಿದೆ ಎಂದು ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ಶ್ರುತಿಹರಿಹರನ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರ್ಜುನ್ ಸರ್ಜಾ ಅವರು, ಹುಡುಗಿ ತಬ್ಬಿಕೊಂಡು ಸಂತೋಷ ಪಡುವ ನೀಚ ಬುದ್ಧಿಯವನಲ್ಲ. ಹೆಣ್ಣಿನ ದೇಹ ಮುಟ್ಟುವ ಚೀಪ್ ಮೆಂಟಾಲಿಟಿ ನನ್ನಲ್ಲಿಲ್ಲ, ಇದಕ್ಕೆ ನಾನು ಪ್ರತಿಕ್ರಿಯಿಸದೇ ಹೋದರೆ, ನಾನು ಆರೋಪ ಹೊತ್ತ ಹಾಗೆ ಆಗುತ್ತೆ ಎಂದು ಹೇಳಿದರು.

ಶ್ರುತಿ ವಿರುದ್ಧ ಸಿಡಿದೆದ್ದ ಮನಿರತ್ನ

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಬಗ್ಗೆ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ನಿರ್ಮಾಪಕ ಮುನಿರತ್ನ ಯರ್ರಾಬಿರ್ರಿ ಕೋಪಿಸಿಕೊಂಡಿದ್ದಾರೆ.

ನಟಿ ಶ್ರುತಿ ಹರಿಹರನ್ ನೆಗೆಟಿವ್ ಪಬ್ಲಿಸಿಟಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ನಿರ್ಮಾಪಕ ಮುನಿರತ್ನ ಆಕೆ ವಿರುದ್ಧ ಗುಡುಗಿದ್ದಾರೆ. ಅಲ್ಲದೇ, ನಟಿ ಶ್ರುತಿ ಹರಿಹರನ್ ಗೆ ಪತ್ರ ಬರೆಯಲು ಮುಂದಾಗಿರುವ ನಿರ್ಮಾಪಕ ಮುನಿರತ್ನ, ಏಳು ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap