ದೊಡ್ಡಬಳ್ಳಾಪುರ:
ಅಪಘಾತ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೂ ಹಾಜರಾಗದೆ ಹಾಗೂ ದಂಡ ಪಾವತಿಸದರಿಂದ ಕಾಂಗ್ರೆಸ್ ನಾಯಕ ಉಗ್ರಪ್ಪನವರ ಚರಾಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ
ದೊಡ್ಡಬಳ್ಳಾಪುರ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಶುಕ್ಲಾಕ್ಷ ಫಾಲನ್ ಅವರು ಆದೇಶ ಹೊರಡಿಸಿದೆ. 2010ರಲ್ಲಿ ಉಗ್ರಪ್ಪನವರು ಕ್ವಾಲಿಸ್ ಕಾರು ಬಾಲಾಜಿ ಎಂಬವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಕಾರ್ಗೆ ವಿಮೆ ಇಲ್ಲವೆಂದು ಆರೋಪಿಸಿ ಗಾಯಾಳು ನ್ಯಾಯಾಲಯದ ದೂರು ಕೂಟ್ಟಿದರು.
ಇದಾದ ನಂತರ 2012 ರಿಂದ ನೋಟಿಸ್ ಜಾರಿ ಮಾಡುತ್ತಿದ್ದರೂ ಉಗ್ರಪ್ಪನವರು ಪ್ರಕರಣದ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆಂದು ನ್ಯಾಯಾಧೀಶರು 94,925 ರೂ. ದಂಡ ವಿಧಿಸಿದ್ದರು.
