ನನಗೆ ಡಿ ಕೆ ಸುರೇಶ್‌ ವಾರ್ನಿಂಗ್‌ ಕೊಟ್ಟಿಲ್ಲ : ಎಂಬಿ ಪಾಟೀಲ್

ಬೆಂಗಳೂರು:

     ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಹೊರನಡೆಯುತ್ತಿದ್ದಾಗ ಡಿ.ಕೆ. ಸುರೇಶ್ ಪ್ರೀತಿಯಿಂದಲೇ ಪಾಟೀಲರೆ ಎಂದು ಗಟ್ಟಿಯಾಗಿ ಕರೆದರು, ನಾನು ವಾಪಸ್ ಅವರ ಬಳಿ ಬಂದೆ, ಅವರು ಗಟ್ಟಿಯಾಗಿರಿ ಎಂದು ಹೇಳಿದರು, ನಾನು ಈಗ ಆಫೀಸ್‌ಗೆ ಹೋಗುತ್ತಿದ್ದೇನೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಬಂದೆ, ಇದನ್ನು ಬಿಟ್ಟು ನನಗೆ ವಾರ್ನಿಂಗ್ ಕೊಟ್ಟರು ಎನ್ನುವುದೆಲ್ಲಾ ಸುಳ್ಳು ಎಂದು ಹೇಳಿದರು.
     “ಡಿಕೆ ಸುರೇಶ್ ನನಗೆ ವಾರ್ನಿಂಗ್ ಕೊಟ್ಟಿಲ್ಲ ನಾನು ಕೂಡ ಅವರಿಗೆ ವಾರ್ನಿಂಗ್ ಕೊಟ್ಟಿಲ್ಲ, ನನಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರಿಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ” ಎಂದು ತಿಳಿಸಿದರು.
     ವಾರ್ನಿಂಗ್ ಎನ್ನುವುದೆಲ್ಲ ನಮ್ಮ ಡಿಕ್ಷನರಿಯಲ್ಲಿ ಇಲ್ಲ, ನಾವು ವಾರ್ನಿಂಗ್ ಕೊಡುವವರೆ ಹೊರತು ತೆಗೆದುಕೊಳ್ಳುವವರಲ್ಲ, ಸುಮ್ಮನೆ ಅವರ ಹೆಸರನ್ನು ತಪ್ಪಾಗಿ ಬಿಂಬಿಸುವುದು ಬೇಕಾಗಿಲ್ಲ. ನಾನು ಮುಂದೆ ಹೋಗುತ್ತಿದ್ದಾಗ ಡಿಕೆ ಸುರೇಶ್ ಅವರು ಪ್ರೀತಿಯಿಂದ ಎಂಬಿ ಪಾಟೀಲರೇ ಅಂತ ಕರೆದರು, ನಾವು ವಾಪಸ್ ಬಂದ ನಂತರ ಪ್ರೀತಿಯಿಂದ ಗಟ್ಟಿಯಾಗಿ ಇರಿ ಎಂದರು, ಪ್ರೀತಿಯಿಂದಲೇ ಅವರು ಮಾತನಾಡಿಸಿದರು, ನಾನು ಆಮೇಲೆ ಸಿಗುತ್ತೇನೆ ಎಂದು ಬಂದೆ” ಇಷ್ಟೇ ಆಗಿರುವುದು ಎಂದರು.
   ಯಾರಿಂದಲೂ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ, ಡಿಕೆ ಸುರೇಶ್ ಕೂಡ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ, ನಮ್ಮ ಸಂಬಂಧ ಚೆನ್ನಾಗಿದೆ, ಈ ರೀತಿ ತಪ್ಪಾಗಿ ಬಿಂಬಿಸುವ ಕೆಲಸ ಆಗಬಾರದು” ಎಂದು ಸ್ಪಷ್ಟಪಡಿಸಿದರು.

    “ನಾನು ಬಿಜಾಪುರದವನು ನಾನು ಯಾರಿಗೂ ಹೆದರುವುದಿಲ್ಲ, ನನಗೆ ಯಾರೂ ಬೆದರಿಕೆ ಹಾಕುವುದು, ವಾರ್ನಿಂಗ್ ಮಾಡುವುದಿಲ್ಲ, ನನ್ನ ತಂದೆ ಕೂಡ ನನಗೆ ಬೆರಳು ತೋರಿಸಿಲ್ಲ. ನಮ್ಮ ಮತ್ತು ಡಿಕೆ ಸುರೇಶ್ ಅವರ ಬಾಂಧವ್ಯ ಚನ್ನಾಗಿದೆ. ಅವರು ತಪ್ಪಾಗಿ ನಡೆದುಕೊಂಡಿಲ್ಲ, ಅವರು ಹಂಗೆ ಮಾಡಿದ್ದರೆ ನಾನು ಅದಕ್ಕೆ ಉತ್ತರ ಕೊಡುತ್ತಿದ್ದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap