ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡ ಮತದಾನ.

 

ಬೆಂಗಳೂರು : ರಾಜ್ಯಸಭೆ ಚುನಾವಣೇಯಲ್ಲಿ ಜೆಡಿಎಸ್ ನ ಕೆಲವು ಶಾಸಕರು ಅಡ್ಡ ಮತದಾನ ಮಾಡುತ್ಥಾರೆ ಎಂಬುದು ಸುಳಿವನ್ನು ಮೊದಲೇ ನೀಡಿದ್ದರು. ಆದರೆ ಯಾರು ಅಡ್ಡಮತದಾನ ಮಾಡುತ್ತಾರೆ ಎಂಬುದು ಕುತೂಹಲ ಮೂಡಿತ್ತು.

ಇನ್ನೂ ಈ ಬಗ್ಗೆ ಎಚ್‍ಡಿ ಕುಮಾರಸ್ವಾಮಿ ಮತ್ತು ಸಿಎಂ ಇಬ್ರಾಹಿಂ ಅವರು ಬೆಳಗ್ಗೆಯೇ ಶ್ರೀನಿವಾಸ ಗೌಡರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ ಎಂದು ತಿಳಿಸಿದ್ದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಬೆಳಗ್ಗೆ ಶ್ರೀನಿವಾಸ ಗೌಡರ ಮನೆಗೆ ಹೋಗಿ ಕೊನೆಯ ಹಂತದ ಮಾತುಕತೆ ನಡೆಸಿದ್ದರು.

ಜೆಡಿಎಸ್ ಶಾಸಕ ಅಡ್ಡಮತದಾನ : ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅ

ಡ್ಡಮತದಾನ ಮಾಡಿದ್ದಾರೆ,  ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂದು ವಿಧಾನಸೌಧದಲ್ಲಿ ಹೇಳಿಕೆ ನೀಡದ್ದಾರೆ. ನಾನು ಈ ಹಿಂದೆ ಕಾಂಗ್ರೆಸ್ ನಿಂದಲೇ ಸಚಿವನಾಗಿದ್ದೆ, ಕುಮಾರಸ್ವಾಮಿ ಅವರು ಸಿಟ್ಟಾದರೂ  ಪರವಾಗಿಲ್ಲ, ರಾಜಕೀಯದಲ್ಲಿ ಇದೆಲ್ಲ ಕಾಮನ್ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಹೇಳಿದರು.

ಮತದಾನಕ್ಕೂ ಮೊದಲು ನಾನು ಯಾರಿಗೆ ಮತ ಹಾಕುತ್ತೇನೆ ಎನ್ನುವುದನ್ನು ಈಗ ತಿಳಿಸುವುದಿಲ್ಲ ಎಂದಿದ್ದ ಶ್ರೀನಿವಾಸ ಗೌಡ ಮತ ಹಾಕಿದ ಬಳಿಕ ನೇರವಾಗಿ ಕಾಂಗ್ರೆಸ್ ಶಾಸಕರಿದ್ದ ಕಚೇರಿಗೆ ತೆರಳಿದರು.

Recent Articles

spot_img

Related Stories

Share via
Copy link
Powered by Social Snap