ಅಜಾತಶತ್ರು, ಭಾರತರತ್ನ, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಸಂತಾಪ

ತಿಪಟೂರು :

         ನಗರದ ಪೈಹೋಟೆಲ್ ವೃತ್ತಲ್ಲಿ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ವಾಜಪೇಯಿವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ದೇಶಕಂಡ ಅಪ್ರತಿಮ ಪ್ರಧಾನಿ, ಸಜ್ಜನ ರಾಜಕಾರಣಿ, ಅಜಾತಶತ್ರು, ವಾಜಪೇಯಿವರು ಜಾತ್ಯಾತೀತ ನಾಯಕರು ಮತ್ತು ತಮ್ಮ ಜೀವನದಲ್ಲೇ ಭ್ರಷ್ಠಾಚಾರದ ಒಂದು ಕಪ್ಪು ಚುಕ್ಕಿಯನ್ನು ಅಂಟಿಸಿಕೊಳ್ಳದ ಮೇರು ವ್ಯಕ್ತಿತ್ವದ ಗಣ್ಯಾತಿಗಣ್ಯ ವ್ಯಕ್ತಿ ಮಾಜಿ ಪ್ರಧಾನಿ ವಾಜಪೇಯಿಯವರು.

        ಸದನದಲ್ಲಿ ಯಾವುದೇ ವಿಷಯವನ್ನು ಹೇಳುವ ಅವರ ವಾಗ್ಜರಿ, ವಿರೋದಪಕ್ಷಗಳು ಕೂಡ ಮೂಗಿನಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿದ್ದರು. ನಾನು ಬದುಕಿರುವುದೇ ದೇಶಕ್ಕಾಗಿ ನಾನು ಸತ್ತಮೇಲು ನನ್ನ ಅಸ್ತಿಗಂಗೆಯಲ್ಲೀ ತೇಲುವಾಗಲೂ ಭಾರತಮಾತೆಗೆ ಜೈಕಾರ ಹಾಕುತ್ತಿರುತ್ತದೆ. ದೇಶದ ಪ್ರತಿಯೊಬ್ಬ ಸಂಸದರನ್ನು ತನ್ನ ಕುಟುಂಬದ ಸದಸ್ಯರಂತೆ ತಿಳಿದು, ಸಾಮಾನ್ಯ ಕಾರ್ಯಕರ್ತನು ಸಹ ನೇರವಾಗಿ ಬೇಟಿಮಾಡುವಂತಹ ಸಂಬಂಧವನ್ನು ಹೊಂದಿದ್ದರು.

            ವಿರುದೋಪಕ್ಷವಿರುವುದೇ ನಮ್ಮನ್ನು ತೆಗಳಲು ಎಂಬ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರನ್ನು ಬಾಂಗ್ಲಾದೇಶದ ವಿರುದ್ದ ಪಾಕಿಸ್ತಾನದ ಹೋರಾಟದ ಸಮಯದಲ್ಲಿ ತೆಗೆದುಕೊಂಡು ದಿಟ್ಟ ನಿರ್ಧಾರಕ್ಕಾಗಿ ‘ದುರ್ಗಿ’ ಎಂದು ಬಣ್ಣಿಸಿದ್ದನ್ನು ನಾವು ಕಾಣಬಹುದು, ಅದೇ ರೀತಿ 1999 ರ ಕಾರ್ಗಿಲ್ ಯುದ್ದದ ಸಮಯದಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಪಾಕಿಸ್ತಾನದ ಹತ್ತಿರ ಪರಮಾಣು ಅಸ್ತ್ರ್ರಗಳಿವೆ ಅವುಗಳಿಂದ ನಿಮ್ಮ ದೇಶಕ್ಕೆ ಹಾನಿಯಾಗಬಹುದು ಯುದ್ದದಿಂದ ಹಿಂದೆ ಸರಿಯಿರಿ ಎಂದಾಗ, ನಮ್ಮ ದೇಶಕ್ಕೇ ಏನಾದರು ಆದರೂ ಪರವಾಗಿಲ್ಲ ನಾಳೆ ವಿಶ್ವದ ಭೂಪಟದಲ್ಲೇ ಪಾಕಿಸ್ತಾನವಿರುವುದಿಲ್ಲ ಎಂಬ ದಿಟ್ಟ ಹೇಳಿಕೆಗೆ ಕ್ಲಿಂಟನ್ ಚಕಿತರಾದರು.

          ಬಿ.ಜೆ.ಪಿ.ಯವರು ಮುಸ್ಲಿಂ ವಿರೋಧಿಗಳು ಎನ್ನುವಂತಹ ಸಂದರ್ಭದಲ್ಲಿ ಜಾತ್ಯಾತೀತ ವ್ಯಕ್ತಿಯಾದ ಕ್ಷಿಪಣಿ ಪಿತಾಮಹಾ ಎ.ಪಿ.ಜೆ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ನೀವು ಒಳ್ಳೆಯವರು ನೀವು ಈ ಪಕ್ಷದಲ್ಲಿ ಇರಬಾರದು ನಮ್ಮ ಪಕ್ಷಕ್ಕೆ ಬನ್ನಿ ಎಂದ ಸಂದರ್ಭದಲ್ಲಿ ಯಾವುದೇ ಒಳ್ಳೆಯ ಮರ ಕೆಟ್ಟಬೀಜಗಳನ್ನು ಸೃಷ್ಟಿಸುವುದಿಲ್ಲ ಒಂದು ದಿನ ಇದರ ಪೈರು ಬಂದೇ ಬರುತ್ತದೆ. ಈ ದಿನ ಕತ್ತಲಿರ ಬಹುದು ಆದರೆ ಕತ್ತಲೂ ಕಳೆದು ಸೂರ್ಯಉದಯಿಸಿದಾಗ ಕಮಲ ಅರಳೇ ಅರಳುತ್ತದೆ ಎಂದು ಹೇಳಿದ್ದನ್ನು ಇಂದು ನಾವು ಭಾರತದಲ್ಲಿ 21 ರಾಜ್ಯಗಳಲ್ಲಿ ಕಮಲ ಅರಳಿದೆ, ಇದಕ್ಕೆ ದೀನದಯಾಳು ಉಪಾಧ್ಯಾಯಾರು ಮರಣಹೊಂದುವುದಕ್ಕಿಂತ ಮುಂಚೆ ನಾನು ಸತ್ತರು ನನ್ನಂತ ನಾಯಕ ಇನ್ನು ಹುಟ್ಟುತ್ತಾರೆ ಎಂಬಂತೆ ಇಂದು ವಾಜಪೇಯಿ ಅಜರಾರಾಮರಾಗಿದ್ದಾರೆ. ಇಂದು ಆತ್ಮಕ್ಕೆ ಸಾವಿಲ್ಲ ವಾಜಪೇಯಿಯವರು ಇಲ್ಲೇ ಎಲ್ಲೂ ಹುಟ್ಟಿರಬಹುದು ಎಂದರು.

           ಈ ಹಿಂದೆ ತಿಪಟೂರಿಗೆ ಬೇಟಿ ನೀಡಿದ ಸಂದರ್ಭದಲ್ಲೂ ಇದೇ ಪೈ ಹೋಟೆಲ್ ವೃತ್ತದಲ್ಲಿ ನಮ್ಮ ಹಿರಿಯರನ್ನು ಭೇಟಿಮಾಡಿದ್ದರು. ಇಂದೂ ಅದೇ ಸ್ಥಳದಲ್ಲಿ ನಾವು ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇವೆ.

          ಈ ಸಂದರ್ಭದಲ್ಲಿ ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹೆಚ್.ಬಿ.ದಿವಾಕರ್, ನಗರಾಧ್ಯಕ್ಷ ಲೋಕೇಶ್, ನಗರಸಭಾ ಸದಸ್ಯರಾದ ತರಕಾರಿ ಗಂಗರಾಜು, ರಾಮಮೋಹನ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷ ಗಂಗರಾಜು, ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page like ಮಾಡಿ

 

Recent Articles

spot_img

Related Stories

Share via
Copy link