“ಅತ್ಯುತ್ತಮ ಪುಸ್ತಕ ಮುದ್ರಣ ವಿನ್ಯಾಸ ಪ್ರಶಸ್ತಿ “

ತುಮಕೂರು 

              ನವದೆಹಲಿಯಲ್ಲಿರುವ ಭಾರತೀಯ ಪ್ರಕಾಶಕರ ಒಕ್ಕೂಟವು (  Federation of Indian Publishers, New Delhi) ಪ್ರತಿ ವರ್ಷವೂ ಪುಸ್ತಕ ತಯಾರಿಕೆಯಲ್ಲಿ ಅತ್ಯುತ್ತಮ ಮುದ್ರಣ ವಿನ್ಯಾಸಕ್ಕಾಗಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ಎಲ್ಲ ಭಾರತೀಯ ಭಾಷೆಗಳ ಪುಸ್ತಕ ಪ್ರಕಾಶಕರು ಇದರಲ್ಲಿ ಭಾಗವಹಿಸುತ್ತಾರೆ.

              ನವಕರ್ನಾಟಕ ಪ್ರಕಾಶನ ಹೊರತಂದಿರುವ ‘ ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ (ಸಂಪಾದಕರು : ಡಾ. ಟಿ. ಆರ್ . ಅನಂತರಾಮು) ಈ ವರ್ಷದ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದ್ದು, ವಿಜ್ಞಾನ-ತಂತ್ರಜ್ಞಾನ-ವೈದ್ಯಕೀಯ ಪುಸ್ತಕಗಳ ವಿಭಾಗದಲ್ಲಿ ಭಾರತೀಯ ಭಾಷೆಗಳಲ್ಲೇ ಮೊದಲ ಬಹುಮಾನ ಪಡೆದಿದೆ.

              ಕನ್ನಡದ ವಿಜ್ಞಾನ ಪುಸ್ತಕಗಳ ಮುದ್ರಣದ ಗುಣಮಟ್ಟವನ್ನು ಸೂಚಿಸುವ ಈ ಪ್ರಶಸ್ತಿ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ಸಾಧನೆ ಎಂಬುದು ನವಕರ್ನಾಟಕ ಪ್ರಕಾಶನದ ಅಭಿಪ್ರಾಯ.

              ಆಗಸ್ಟ್ 30ರಂದು ನವ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link