ಗುಬ್ಬಿ
ತಾಲ್ಲೂಕಿನ ಬಿದರೆಹಳ್ಳ ಕಾವಲ್ನಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಎಎಲ್ ಕೈಗಾರಿಕಾ ಪ್ರದೇಶದಲ್ಲಿ ತಾಲ್ಲೂಕಿನ ಅದಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಪೈಲೇರಿಯ ಸಮೀಕ್ಷೆ ನಡೆಸಲಾಯಿತು.
ಹೊರ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರಿಗೆ ರಾತ್ರಿ 6 ಗಂಟೆಯಿಂದ 12 ಗಂಟೆಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸುಮಾರು 70ಕ್ಕೂ ಹೆಚ್ಚು ಜನರ ರಕ್ತವನ್ನು ಸಂಗ್ರಹಿಸಿ ಅನೇಕಾಲು ರೋಗವನ್ನು ಪತ್ತೆ ಹಚ್ಚಲು ಜಿಲ್ಲಾ ಪ್ರಯೋಗ ಶಾಲಾ ಕೇಂದ್ರಕ್ಕೆ ಪರೀಕ್ಷೆ ನಡೆಸಲು ಕಳಿಸಲಾಯಿತು. ನಿಟ್ಟೂರು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಪುಟ್ಟಯ್ಯ, ಕಿರಿಯ ಸಹಾಯಕರು ಅರುಣ್, ರಮೇಶ್, ಪ್ರಯೋಗ ಶಾಲಾ ತಂತ್ರಜ್ಞರಾದ ರಮ್ಯ, ಸುರೇಶ್, ಆರೋಗ್ಯ ಸಹಾಯಕಿ ತಿಮ್ಮಕ್ಕ, ಆಶಾ ಕಾರ್ಯಕರ್ತೆ ಶೋಭಾ ಆರೋಗ್ಯ ನಿರೀಕ್ಷಕ ವಿಶಾಲ್ ಮತ್ತಿತರರು ಇದ್ದರು.
