ಜಗಳೂರು:
ರಾಜ್ಯದಲ್ಲಿ ಅರಣ್ಯಬೆಳೆಸಲು ಸರ್ಕಾರ ಮತ್ತು ಸಂಘಸಂಸ್ಥೆಗಳು ಪ್ರೊತ್ಸಾಹ ನೀಡುವ ಮೂಲಕ ಸಸಿಗಳನ್ನು ನೆಡಲು ಲಕ್ಷಾಂತರಗಟ್ಟಲೆ ಹಣ ಖರ್ಚುಮಾಡುತ್ತಿದೆ ಆದರೆ ಇಲ್ಲಿನ ಅರಣ್ಯ ಇಲಾಖೆಯು ಅಣಬೂರಿನ ಮೀಸಲು ಅರಣ್ಯಪ್ರದೇಶದಲ್ಲಿ 120 ಹೆಕ್ಟರ್ ಪ್ರದೇಶದಲ್ಲಿ ಅರಣ್ಯನಾಶಕ್ಕೆ ಇಲಾಖೆ ಮುಂದಾಗಿದೆ ಇದಕ್ಕೆ ಯಾರು ಹೊಣೆ ಎಂದು ತಾಲೂಕು ಪಂಚಾಯ್ತಿ ಕುಬೇಂದ್ರಪ್ಪ ಆರೋಪಿಸಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ತಾ.ಪಂ.ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಪಟ್ಟಣದ ರಸ್ತೆ ಅಗಲೀಕರಣದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಪಿಡಬ್ಲೂಡಿ ಎಇಇ ಅವರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಖಾಸಗಿ ಕಟ್ಟಡಗಳನ್ನು ತೆರವುಗೊಳಿಸದೆ ಮೌನವಹಿಸಿದ್ದಾರೆ. ಪ್ರಮುಖ ರಸ್ತೆ ಅಗಲೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರೂ ಸಹ ನಿರ್ಲಕ್ಷ್ಯವಹಿಸಿದ್ದಾರೆ ಎಂದು ತಾ.ಪಂ ಸದಸ್ಯರುಗಳಾದ ಮರೇನಹಳ್ಳಿ ಬಸವರಾಜ್ ,ಶಂಕರನಾಯ್ಕ ,ತಿಮ್ಮಾಭೋವಿ ತರಾಟೆ ತೆಗೆದುಕೊಂಡರು.
ಸ್ಥಾಯಿಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ,ತಾಲೂಕು ಪಂಚಾಯ್ತಿ ಆಡಳಿತಕ್ಕೆ ಬಂದು 3 ವರ್ಷ 6ತಿಂಗಳು ಕಳೆಯುತ್ತಾ ಬಂದರೂ ಒಂದುಬಾರಿಯಾದರೂ ಸ್ಥಾಯಿ ಸಮಿತಿಯ ಸಭೆ ಕರೆದಿಲ್ಲ. ಜನಪ್ರತಿನಿಧಿಗಳೆಂದರೆ ಇಲ್ಲಿನ ಅಧಿಕಾರಿಗಳಿಗೆ ನಿರ್ಲಕ್ಷವಾಗಿದೆ ಎಂದು ದೂರಿದರು.
ತಾ.ಪಂ ಇಒ ಜಾನಕೀರಾಮ್ ಮಾತನಾಡಿ,ತಾಲೂಕಿನ 84 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಪ್ರತಿದಿನ 79 ಟ್ಯಾಂಕರ್ ಹಾಗೂ 36 ಖಾಸಗಿ ಬೋರ್ವೆಲ್ ಗಳಿಂದ ನೀರಿನ ಕೊರತೆಯಾಗದಂತೆ ಸರಬರಾಜು ಮಾಡಲಾಗುತ್ತಿದೆ
ವ್ಯಾಸಗೊಂಡನಹಳ್ಳಿ,ಸೊಕ್ಕೆ,ಪಲ್ಲಾಗಟ್ಟೆ,ತಾರೆಹಳ್ಳಿ ಗ್ರಾಮದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ವಸತಿರಹಿತರಿಗೆ ನಿವೇಶನ ಸಹಿತವಾಗಿ ವಸತಿ ಕಲ್ಪಿಸಲು ಪಟ್ಟಿ ತಯಾರಿಸಲಾಗಿದ್ದು ತಹಶೀಲ್ದಾರವರ ಜೊತೆಗೂಡಿ ಶೀಘ್ರವೇ ಸೂಕ್ತ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.
ಅಂಬೇಡ್ಕರ್ ವಸತಿಯೋಜನೆಯಡಿ 2ಸಾವಿರ ಮನೆ ಮಂಜೂರು ಮಾಡಲು ತಾಲೂಕು ಪಂಚಾಯ್ತಿ ಲಾಗಿನ್ ನಲ್ಲಿದ್ದು ಅನುದಾನ ಕೊರತೆಯಿಂದ ಸರ್ಕಾರದಿಂದ ಮಂಜುರಾಗುವಲ್ಲಿ ವಿಳಂಬವಾಗಿದೆ ಅನುದಾನ ಬಂದ ನಂತರ ಜಿಪಿಎಸ್ ಮಾಡಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಜಿ.ಪಂ ಎಇಇ ಬಾಲಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿ ಪ್ರಸಕ್ತ ವರ್ಷದಲ್ಲಿ ಜಿಲ್ಲಾಪಂಚಾಯ್ತಿ ಯೋಜನೆಯಡಿ 72 ಲಕ್ಷ ಅನುದಾನ ನಿಗದಿಯಾಗಿದ್ದು 30 ಲಕ್ಷ ಟಾಸ್ಕ್ ಫೊರ್ಸಗಾಗಿ ಮೀಸಲಿರಿಸಿದ್ದು, ಉಳಿದ ಹಣವನ್ನು ರಸ್ತೆ,ಚರಂಡಿ ಸೇರಿದಂತೆ ಇತರೆ ಮೂಲಸೌಕರ್ಯಕ್ಕೆ ವಿನಿಯೋಗಿಸಲಾಗುವುದು ಎಂದರು.
ಪ್ರಸಕ್ತ ವರ್ಷದಲ್ಲಿ ಕೇವಲ ಶೇ.20 ರಷ್ಟು ಮಳೆಯಾಗಿದ್ದು ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದು ರೈತರ ಬಿತ್ತನೆಗೆ ಅಗತ್ಯ ಬೀಜಗೊಬ್ಬರ ಒದಗಿಸಲು ಹೋಬಳಿ ಕೇಂದ್ರವ್ಯಾಪ್ತಿಯಲ್ಲಿ ರೈತಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದ್ದು ಈಗಾಗಲೆ ಮೆಕ್ಕೆಜೋಳ ,ಬಿಳಿಜೋಳ,ತೊಗರಿ ಬೀಜಗಳನ್ನು ವಿತರಿಸಲಾಗುತ್ತಿದೆ 15 ರನಂತರ ಶೇಂಗಾ ಬೀಜ ವಿತರಿಸಲಾಗುವುದು ಕೃಷಿಸಹಾಯಕ ನಿರ್ದೇಶಕ ಕೆಟಿ ಬಸಣ್ಣ ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾಶಿವಾನಂದಪ್ಪ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ ಸದಸ್ಯರಾದ ಬಿದರಕೆರೆ ಬಸವರಾಜ್ ಗಡಿಮಾಕುಂಟೆ ಸಿದ್ದೇಶ್ ಕಮಲಮ್ಮ ಲಕ್ಷ್ಮಮ್ಮ ಮಮತಾಮಲ್ಲೇಶ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
