ಅ.2ರಿಂದ ದೊಡ್ಡರಾಂಪುರ ಜಾತ್ರೆ:ಮೂಲಭೂತ ಸೌಲಭ್ಯ ಕಲ್ಪಿಸಲು ಸೂಚನೆ

ಚಿಕ್ಕನಾಯಕನಹಳ್ಳಿ

                 ಅಕ್ಟೋಬರ್ 2ರಂದು ನಡೆಯುವ ದೊಡ್ಡರಾಂಪುರ ಜಾತ್ರೆಯಲ್ಲಿ ಯಾವುದೇ ಮದ್ಯ ಮಾರಾಟ, ಪ್ರಾಣಿ ವಧೆ ಮಾಡದಂತೆ ಹಾಗೂ ಜಾತ್ರೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸುವಂತೆ ಶಾಸಕ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.

                 ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಕ್ಟೋಬರ್ 2 ಮತ್ತು 3ರಂದು ನಡೆಯಲಿರುವ ದೊಡ್ಡರಾಂಪುರ ಹಾಗೂ ಸುತ್ತಮುತ್ತಲಿನ 22ಹಳ್ಳಿಗಳ ಬಹುದೊಡ್ಡ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಹಾಗೂ ಸಾರ್ವಜನಿಕರು ಜಾತ್ರೆಗೆ ಬಂದು ಹೋಗಲು ಸರ್ಕಾರಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇರಲು ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

                 ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಅ.2ರಂದು ಮಾಡದಂತೆ ಸೇರಿದ್ದ ಗ್ರಾಮಸ್ಥರಿಗೆ ಮನವಿ ಮಾಡಿದರು. ಕಾನೂನು ಸಂಚಾರ ಸುಗಮವಾಗಿರುವಂತೆ ಮದ್ಯ ಮಾರಾಟವನ್ನು ಅ.1ರಂದೇ ಅಂಗಡಿಗಳನ್ನು ಬಂದ್ ಮಾಡುವಂತೆ ತಿಳಿಸಿದರು. ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

                 ಈ ಸಂದರ್ಭದಲ್ಲಿ ತೀರ್ಥಪುರ ಗ್ರಾ.ಪಂ.ಅಧ್ಯಕ್ಷ ನಾಗಯ್ಯ, ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್‍ಕುಮಾರ್, ಕೇಶವಮೂರ್ತಿ, ಗ್ರಾ.ಪಂ.ಸದಸ್ಯರುಗಳಾದ ನಾಗಭೂಷಣ್, ನಟರಾಜು, ಕೆಂಪರಾಜು, ಪ್ರಭಾರ ತಹಸೀಲ್ದಾರ್ ಸೋಮಪ್ಪ ಕಳಕೋಳ, ಶಿರಸ್ತೆದಾರ್ ಪ್ರಕಾಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಇತರೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link