ಆಪರೇಷನ್ ಕಮಲ ಮಾಡಿದರೆ, ಅದಕ್ಕೆ ಪ್ರತಿಯಾಗಿ ಮಾಡುವುದು ಗೊತ್ತು

 ದಾವಣಗೆರೆ:

      ಬೆಳಗಾವಿಯ ಜಾರಕಿಹೊಳಿ ಸಹೋದರರು ಯಾರೂ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ಶ್ಯಾಮನೂರು ಶಂಕರಪ್ಪ ಅವರು ಹೇಳಿದರು.

      ದಾವಣಗೆರೆಯಲ್ಲಿ ‘ರೆಫೆಲ್‌ ಹಗರಣ’ ಖಂಡಿಸಿ ಕಾಂಗ್ರೆಸ್‌ ಪಕ್ಷ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾತನಾಡುತ್ತಿದ್ದ ಅವರು, ಸಚಿವ ರಮೇಶ್ ಜಾರಕಿಹೊಳಿಯಾಗಲೀ, ಶಾಸಕ ಸತೀಶ್ ಜಾರಕಿಹೊಳಿಯಾಗಲಿ ಅಥವಾ ನಾನೂ ಕೂಡಾ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಿದರೆ, ನಾವು ಅದಕ್ಕೆ ಪ್ರತಿಯಾಗಿ ಮಾಡವುದು ಗೊತ್ತು ಎಂದ ಅವರು ನನಗೆ ಸಚಿವ ಸ್ಥಾನ ಬರಲಿ, ಬಿಡಲಿ ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. 

      ‘ಅವರ ಕಡೆಯವರೇ ಕಾಂಗ್ರೆಸ್‌ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರು ಏನಾದರು ನಮ್ಮವರ ಕಡೆಗೆ ಕೈ ಹಾಕಿದರೆ, ನಾವೂ ಅವರ ಕಡೆಯವರನ್ನು ಕರೆದುಕೊಂಡು ಬಂದು ಮುಯ್ಯಿಗೆ ಮುಯ್ಯಿ ತೀರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap