ತುಮಕೂರು:
ಇಬ್ಬರು ಆಸಾಮಿಗಳು ಯಶವಂತಪುರ ರೈಲ್ವೆ ನಿಲ್ದಾಣದ ವೇದಿಕೆ ನಂ.2 ರಲ್ಲಿ ನಿಂತಿದ್ದ ಕಾಚಿಗೂಡ ಎಕ್ಸ್ಪ್ರೆಸ್ ರೈಲು ಗಾಡಿಯಲ್ಲಿದ್ದ ಪ್ರಯಾಣಿಕರ ಮಧ್ಯೆ ನುಸುಳುತ್ತಾ ಬೋಗಿಯಿಂದ ಬೋಗಿಗೆ ಹತ್ತುವುದು, ಇಳಿಯುವುದು, ಪ್ರಯಾಣಿಕರ ಲಗೇಜುಗಳನ್ನು ಮುಟ್ಟುತ್ತಿದ್ದುದನ್ನು ಗಮನಿಸಿದ ಪೊಲೀಸರು ಆರೋಪಿಗಳನ್ನು ವಿಚಾರಿಸಲಾಗಿ ಸಮಂಜಸ ಉತ್ತರ ನೀಡದಿದ್ದಾಗ ಅವರ ಬಳಿಯಿದ್ದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಮಂಜುನಾಥ್ (32) ಚಿಪ್ಪಲಹಟ್ಟಿ ಗ್ರಾಮ ಮಡಕಶಿರಾ ತಾಲ್ಲೂಕು ಹಾಗೂ ಮಾರುತಿ (19) ಪೋಟ್ಲಪೂರಿ ಗ್ರಾಮ ಚಿತ್ರಪಲ್ಲಿ ಮಂಡಲಂ ಅನಂತಪುರ ಜಿಲ್ಲೆ ಇವರುಗಳನ್ನು ವಶಕ್ಕೆ ಪಡೆದು ಅವರುಗಳಿಂದ ರೆಡ್ ಮೀ ನೋಟ್-4, ಮೈಕ್ರೋಮ್ಯಾಕ್ಸ್, ಸ್ಯಾಮ್ಸಂಗ್, ಗೆಲಾಕ್ಸಿ, ವಿಡಿಯೋಕಾನ್, ಲೆನೋವ, ಎಲ್.ಜಿ. ರೆಡ್ಮಿ ನೋಟ್-4, ಟೈಟಾನ್ ಟಿ40 ಹಾಗೂ ಲಾವ ಮೊಬೈಲ್ಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಯಶವಂತಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ಬೇಕಾದಲ್ಲಿ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರನ್ನಾಗಲಿ (080-23376404) ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080-22871291 ಇವರನ್ನು ಸಂಪರ್ಕಿಸಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
