ಹಿರಿಯೂರು :
ನಗರದ ಇನ್ನರ್ವೀಲ್ ಕ್ಲಬ್ ವತಿಯಿಂದ ಪತ್ರಿಕೆ ವಿತರಕರ ದಿನಾಚರಣೆ ಪ್ರಯುಕ್ತ ಹಿರಿಯ ಪತ್ರಕರ್ತರು ಹಾಗೂ ಸಂಜೆಯವಾಣಿ ಪತ್ರಿಕೆ ವಿತರಕರಾದ ಎಂ.ರವೀಂದ್ರನಾಥ್ ರವರ ಮನೆಗೆ ಭೇಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಸಪ್ನಾ ಸತೀಶ್ ರವರು ಪ್ರತೀ ದಿನ ನಮ್ಮ ಮನೆಗಳಿಗೆ ದಿನಪತ್ರಿಕೆಗಳನ್ನು ವಿತರಿಸುವ ಪತ್ರಿಕೆ ವಿತರಕರ ಸೇವೆ ಅಮೂಲ್ಯವಾದದ್ದು ಎಂದರಲ್ಲದೆ ಹಾಗೂ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಪತ್ರಿಕೆ ವಿತರಕರಾಗಿ, ಪತ್ರಿಕೆವರದಿಗಾರರಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರವೀಂದ್ರನಾಥ್ ರವರು ಸಲ್ಲಿಸಿರುವ ಸೇವೆ ಅನನ್ಯವಾದದ್ದು ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂಬುದಾಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇನ್ನರ್ವೀಲ್ ಕ್ಲಬ್ನ ಕಾರ್ಯದರ್ಶಿ ಜ್ಞಾನೇಶ್ವರಿತಿಪ್ಪೇಸ್ವಾಮಿ, ಪದ್ಮಜಾ ಎಂ ಶೆಟ್ಟಿ, ಸರ್ವಮಂಗಳರಮೇಶ್, ಸೌಮ್ಯಪ್ರಶಾಂತ್, ಸುಚಿತ್ರಅಮರನಾಥ್,ಸ್ವರ್ಣಲತಾರೆಡ್ಡಿ ಹಾಗೂ ಕಿರಣ್ಮಿರಜ್ಕರ್ ಉಪಸ್ಥಿತರಿದ್ದರು.