ಎಂಜಿನಿಯರ್‌ಗಳು ದೇಶ ಮತ್ತು ಸಮಾಜದ ನಿರ್ಮಾತೃಗಳು : ಸಿಎಂ

ಬೆಂಗಳೂರು:

     ಎಂಜಿನಿಯರ್‌ಗಳು ದೇಶ ಮತ್ತು ಸಮಾಜದ ನಿರ್ಮಾತೃಗಳು, ದೇಶವನ್ನು ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯುವವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

     ಬೆಂಗಳೂರಿನ ಇಂಜಿನಿಯರ್‌ಗಳ ಸಂಸ್ಥೆ (ಭಾರತ) ಶುಕ್ರವಾರ ಆಯೋಜಿಸಿದ್ದ 56ನೇ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.

    “ಇಂದು ಇಂಜಿನಿಯರ್‌ಗಳ ದಿನ ಮತ್ತು ವಿಶ್ವ ಪ್ರಜಾಪ್ರಭುತ್ವ ದಿನ (ಸೆಪ್ಟೆಂಬರ್ 15), ಈ ಎರಡರ ಉದ್ದೇಶವು ಉತ್ತಮ ಸಮಾಜವನ್ನು ನಿರ್ಮಿಸುವುದಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಭವಿಷ್ಯದ ಸಮಾಜ ಹೇಗಿರಬೇಕು ಎಂಬ ದೃಷ್ಟಿಯನ್ನು ಹೊಂದಿದ್ದರು ಮತ್ತು ನಮ್ಮಲ್ಲೂ ಅದೇ ದೂರದೃಷ್ಟಿ ಇರಬೇಕು. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದಲೇ ಮೈಸೂರಿನ‌ ಅಭಿವೃದ್ಧಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ ಎಂದು ಹೇಳಿದರು.

    ಕಲಾತ್ಮಕ ಕಟ್ಟಡಗಳನ್ನು ನಿರ್ಮಿಸುವ ಕುರಿತು ಮಾತನಾಡಿ, ಎಂಜಿನಿಯರ್‌ಗಳು ಖಾಸಗಿ ಸಂಸ್ಥೆಗಳಿಗೆ ಮಾತ್ರವಲ್ಲದೆ, ಸರ್ಕಾರಿ ಕಟ್ಟಡಗಳು ಮತ್ತು ಯೋಜನೆಗಳಿಗೆ ಉತ್ತಮ ವಿನ್ಯಾಸ ರಚನೆಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.
 
    ಈ ಸಂದರ್ಭದಲ್ಲಿ ಇಂಜಿನಿಯರ್ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ 15 ಖ್ಯಾತ ಇಂಜಿನಿಯರ್‌ಗಳನ್ನು ಪುರಸ್ಕರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap